ಹುಬ್ಬಳ್ಳಿ: ಇಸ್ಲಾಮಿಕ್ ಅಥವಾ ಯಾವುದೇ ಜಾತಿ, ಮತ, ಪಂಥಗಳ ವಿರುದ್ಧ ನಮ್ಮ ಹೋರಾಟವಲ್ಲ, ಲವ್ ಜಿಹಾದಿ ಮಾನಸಿಕತೆ ವಿರುದ್ಧ ನಮ್ಮ ಹೋರಾಟ ನಡೆದಿದೆ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇಲ್ಲಿಯ ಮೂರುಸಾವಿರಮಠದ ಆವರಣದಲ್ಲಿ ಸದ್ಭಾವ ವೇದಿಕೆ ಹುಬ್ಬಳ್ಳಿ ವತಿಯಿಂದ ಲವ್ ಜಿಹಾದಿ, ಡ್ರಗ್ ಮಾಫಿಯಾ, ಅಲ್ಪಸಂಖ್ಯಾತರ ತುಷ್ಟೀಕರಣ, ಕಾನೂನು ಸುವ್ಯವಸ್ಥೆಯ ಕುಸಿತ, ಮಹಿಳೆ-ವಿದ್ಯಾರ್ಥಿನಿಯರ ಅಸುರಕ್ಷತೆ ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
Small Saving: ಈ ಯೋಜನೆಯಲ್ಲಿ 417ರೂ. ಹೂಡಿಕೆ ಮಾಡಿದ್ರೆ ಮಿಲೇನಿಯರ್ ಆಗಬಹುದು..! ಹೇಗೆ ಗೊತ್ತಾ..?
ನಮ್ಮ ನಾಡಿನ ಹಿಂದೂ ಹೆಣ್ಣುಮಕ್ಕಳನ್ನು ಲವ್ ಬಲೆಗೆ ಬೀಳಿಸಿಕೊಂಡು ಜಿಹಾದಿ ಮಾಡುವ ಮಾನಸಿಕತೆ ವಿರುದ್ಧ ಇಡೀ ನಾಡು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ ಎಂದರು. ಪಕ್ಕದ ಮನೆ ಸಮಸ್ಯೆ ಎಂದುಕೊಂಡು ಸುಮ್ಮನಿದ್ದರೆ, ನಾಳೆ ನಮ್ಮ ಮನೆಯಲ್ಲೂ ಇಂತಹ ಘಟನೆಗಳು ನಡೆಯುವ ಕಾಲ ದೂರವಿಲ್ಲ. ಹೀಗಾಗಿ ಒಗ್ಗಟ್ಟಿನ ಹೋರಾಟ ಅನಿವಾರ್ಯ ಎಂದು ಪ್ರತಿಪಾದಿಸಿದರು.