ಬೆಂಗಳೂರು: ಬೆಂಗಳೂರಿನ ಜಯನಗರದ ಬಿಇಎಸ್ ಕಾಲೇಜಿನಲ್ಲಿ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಮತದಾನ ಮಾಡಿದರು. ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಊರಿಗೆ ಹೋಗಬೇಕಿತ್ತು ಅದಕ್ಕೆ ಬೇಗ ಮತದಾನ ಮಾಡಲು ಬಂದ್ವಿ ಎಂದು ತಿಳಿಸಿದರು.
ರಾಜ್ಯಕ್ಕೆ “ರಾಗಾ” ಎಂಟ್ರಿ: ಗಣಿನಾಡಲ್ಲಿ ಇಂದು ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ!
ಮತದಾನ ಶ್ರೇಷ್ಠ ದಾನ. ಎಲ್ಲರಿಗೂ ಹೇಳ್ತಿನಿ ಮತದಾನ ಮಾಡಿ ಎಂದು ಹೇಳುವೆ. ಸುಮ್ಮನೇ ಮನೆಯಲ್ಲಿ ಕುಳಿತು ಕಾಮೆಂಟ್ ಮಾಡುವುದಲ್ಲ. ಯುವ ಸಮೂಹ ಮತ ಹಾಕಲು ಮುಂದೆ ಬರಬೇಕು. ಮತದಾನ ಮಾಡಿ ಅಭಿಪ್ರಾಯ ತಿಳಿಸಬೇಕು. ಹೆಚ್ಚೆಚ್ಚು ಜನ ಮತದಾನ ಮಾಡಬೇಕು. ನಮ್ಮಂತಹ ಹಿರಿಯರು ಕ್ಯೂ ನಲ್ಲಿ ನಿಂತು ಮತದಾನ ಮಾಡ್ತಾರೆ. ಯುವಕರು ಕೂಡ ಮಾಡಬೇಕು ಎಂದು ಮನವಿ ಮಾಡಿದರು.
"Don't sit at home, come out and vote, it's your right.." says RS MP Sudha Murty after casting vote in Bengaluru
Read @ANI Story | https://t.co/0G7SpOHCT7#SudhaMurty #LokSabhaElections2024 #Bengaluru pic.twitter.com/FVkAU1xm4E
— ANI Digital (@ani_digital) April 26, 2024
ಗ್ರಾಮೀಣ ಪ್ರದೇಶಗಳಲ್ಲಿ ಜನರು ಮತಗಟ್ಟೆವರೆಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಾರೆ. ಅದೇ ಬೆಂಗಳೂರು ಸೇರಿದಂತೆ ಬಹುತೇಕ ನಗರದಲ್ಲಿ ಪ್ರತಿಬಾರಿಯೂ ಮತದಾನ ಕಡಿಮೆ ಆಗುತ್ತಿದೆ. ಹೀಗಾಗಿ ನಗರ ಪ್ರದೇಶಗಳಲ್ಲಿನ ಜನರೂ ಸಹ ಮತ ಚಲಾಯಿಸಬೇಕೆಂದು ಅವರು ಕರೆ ನೀಡಿದರು.