ಕೋಲಾರ:- ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ದೇವೇಗೌಡರಲ್ಲ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ದೇವೇಗೌಡರಲ್ಲ, ಬದಲಾಗಿ ವೀರಪ್ಪ ಮೊಯ್ಲಿ ಅಂತ ಹೇಳಿದ್ದಾರೆ.
Karnataka Weather: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಮಳೆ ಮುನ್ಸೂಚನೆ!
ಬಿಜೆಪಿ ಕ್ಯಾನ್ಸರ್ ಇದ್ದಂತೆ, ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಮ್ಮನ್ನೆ ಮುಗಿಸಿಬಿಡ್ತಾರೆ ಅಂತ ಜಮೀರ್ ಅಹ್ಮದ್ ಹೇಳಿದ್ದಾರೆ. ಬಿಜೆಪಿಯ ಸಾಧನೆ ಶೂನ್ಯ, ಕೇವಲ ಧರ್ಮ ಧರ್ಮಗಳ ಮಧ್ಯೆ ವೈಮನಸ್ಸು ತರ್ತಾರೆ ಅಂತ ಜಮೀರ್ ಅಹ್ಮದ್ ಹೇಳಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಂತ ಜಮೀರ್ ಹೇಳಿದ್ದಾರೆ. ದೇವೇಗೌಡರು ಮುಸ್ಲಿಮರಿಗೆ ಯಾವುದೇ ಮೀಸಲಾತಿ ನೀಡಿಲ್ಲ ಅಂತ ಇದೇ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾನ್ ಹೇಳಿದ್ರು.
ನಾನು ಕುಮಾರಸ್ವಾಮಿ ಅವರನ್ನ ಹತ್ತಿರದಿಂದ ನೋಡಿದ್ದೇನೆ. ಕುಮಾರಸ್ವಾಮಿಯ ಎಲ್ಲಾ ವಿದ್ಯೆಗಳು ನಾನು ನೋಡಿದ್ದೇನೆ. ಆದರೆ ಅವರ ಚಡ್ಡಿಯನ್ನು ನಾನೆಂದು ಗಮನಿಸಿಲ್ಲ, ಈಗ ಅವರೇ ಋಜು ಮಾಡಿದ್ದಾರೆ ಅಂತ ಜಮೀರ್ ಅಹ್ಮದ್ ವ್ಯಂಗ್ಯವಾಡಿದ್ದಾರೆ.