ತುಮಕೂರು: ಎನ್ ಡಿ ಎ ಮೈತ್ರಿ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರಿಂದ ಧಿಕ್ಕಾರ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಮೂವರು ಕಾಂಗ್ರೆಸ್ ಕಾರ್ಯಕರ್ತೆಯರ ಬಿಡುಗಡೆಯಾಗಿದ್ದಾರೆ. ವಿಜಯ ಲಕ್ಷ್ಮಿ,
ಭಾಗ್ಯಮ್ಮ ರಮೇಶ್ ಮತ್ತು ಸೌಭಾಗ್ಯ ಬಿಡುಗಡೆಗೊಂಡ ಕಾಂಗ್ರೆಸ್ ಕಾರ್ಯಕರ್ತೆಯರು ಆಗಿದ್ದು, ಸೆಕ್ಷನ್ 107 ಅಡಿ ಪ್ರಕರಣ ದಾಖಲಿಸಿಕೊಂಡು ಹೊಸ ಬಡಾವಣೆ ಪೊಲೀಸರು ತಡರಾತ್ರಿ ಬಿಡುಗಡೆಗೊಳಿಸಿದರು. ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಹೈಡ್ರಾಮಾ ಸೃಷ್ಟಿಸಿದ್ದರು.