ಹಿರಿಯೂರು : ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಎಲ್ಲಾ ನಾಯಕರು ಭ್ರಷ್ಟಾಚಾರ ಹಾಗೂ ಹಗರಣಗಳಲ್ಲಿ ತಗ್ಲಾಕ್ಕೊಂಡಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿ ಬಂದು, ಬೇಲ್ ಮೇಲೆ ಇದ್ದಾರೆ. ಇನ್ನು ಕೆಲವರು ಕೋರ್ಟ್ ಗೆ ಅಲೆಯುತ್ತಿದ್ದಾರೆ ಎಂದು ಎನ್ ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಸಾಲಿನಲ್ಲಿ ನಾನು ಕುಳಿತುಕೊಳ್ಳುತ್ತೇನೆ. ಅದೇ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ರಾಹುಲ್ ಗಾಂಧಿಯವರ ಹಿಂಭಾಗದಲ್ಲಿ ಕೂರಬೇಕಾಗುತ್ತದೆ. 30 ಇದ್ದಿದ್ದು, 31 ಆಗಬಹುದು ಅಷ್ಟೇ ಹಾಗಾಗಿ ಆಡಳಿತ ಪಕ್ಷದ ಸದಸ್ಯ ಲೋಕಸಭೆಯಲ್ಲಿ ಇರಬೇಕು ಆಗಾಗಿ ಬಿಜೆಪಿ ಅಭ್ಯರ್ಥಿನ ಬೆಂಬಲಿಸಿ ಆಶಿರ್ವಾದ ಮಾಡಬೇಕು ಎಂದರು.
ಬರದಿಂದ ರೈತರಿಗೆ ಬೆಳೆ ಕೈ ಸಿಕ್ಕಿಲ್ಲ. ಕಿಸಾನ್ ಸನ್ಮಾನ ಯೋಜನೆಯ ಜೊತೆಗೆ ಪ್ರಧಾನ ಮಂತ್ರಿ ಫಸಲು ಭಿಮಾ ಯೋಜನೆಯಲ್ಲಿ ರೈತರಿಗೆ ಜಿಲ್ಲೆಯಲ್ಲಿ 284 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದರಿಂದ ರೈತರಿಗೆ ಸಾವಿರ ಸಾವಿರ ಹಣ ಬಂದಿದೆ. ಇದರಿಂದ ಬರಗಾಲದ ಪರಿಸ್ಥಿತಿಯಲ್ಲಿ ಸಹಾಯವಾಗಿದೆ ಎಂದರು.