ಶಿಡ್ಲಘಟ್ಟ: ನನ್ನ ನಾಯಕತ್ವದಲ್ಲಿ ಪಕ್ಷ ಮುನ್ನಡೆಯುತ್ತದೆ, ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಉಂಟಾಗುವುದು ಬೇಡ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ತಿಳಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಕೆವಿ. ಗೌತಮ್ ಪ್ರಚಾರ ಪ್ರವಾಸ ಕೈಗೊಳ್ಳುವ ಕುರಿತು ನಗರದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಮುಖಂಡರ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ನ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಬರುವವರನ್ನು ಸ್ವಾಗತಿಸುತ್ತೇವೆ, ಅದರ ಅರ್ಥ ನಾಯಕತ್ವ ಬಿಟ್ಟು ಕೊಡುತ್ತೇವೆ ಎಂದಲ್ಲ. ಕ್ಷೇತ್ರದಲ್ಲಿ ನನ್ನ ನಾಯಕತ್ವ ಮುಂದುವರೆಯುತ್ತದೆ ಕಾರ್ಯಕರ್ತಲ್ಲಿ ಯಾವ ಗೊಂದಲವು ಬೇಡ ಎಂದರು.
ಏಪ್ರಿಲ್ 15 ರಂದು ಸೋಮವಾರ ಲೋಕಸಭಾ ಅಭ್ಯರ್ಥಿ ಕೆವಿ. ಗೌತಮ್ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಿದ್ದು, ಅಂದು ಬೆಳಿಗ್ಗೆ ಚಿಲಕಲನೇರ್ಪು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 9.30 ಕ್ಕೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಪ್ರಾರಂಭಿಸಲಾಗುವುದು. ನಂತರ ಬುರುಡುಗುಂಟೆ ಹಾಗು ಮದ್ಯಾನ 1.ರಿಂದ 2. ರವರೆಗೆ ದಿಬ್ಬೂರಹಳ್ಳಿ ಪ್ರಚಾರ ಕಾರ್ಯ ಮುಗಿಸಿ ಅಲ್ಲಿಂದ ಅಬ್ಲೂಡು, ನಂತರ ಮೇಲೂರು ಅದೇ ದಿನ ಸಯಾಂಕಾಲ 6. ರಿಂದ ರಾತ್ರಿ 9. ರ ತನಕ ಜಂಗಮಕೋಟೆಯಲ್ಲಿ ಪ್ರಚಾರ ಕೈಗೊಳ್ಳಲಿದ್ದೇವೆ.
ಪ್ರಚಾರ ಕಾರ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂಸಿ ಸುಧಾಕರ್ ಹಾಗು ಶಾಸಕರುಗಳು, ಜಿಲ್ಲಾ ಮುಖಂಡರು ಭಾಗವಹಿಸಲಿದ್ದು, ಆಯಾ ಭಾಗದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯೆಕ್ಷೆ ಸಹನಾ ರಾಜೀವ್ ಗೌಡ, ಅಪ್ಸರ್ ಪಾಷ, ಹಾಗು ಇನ್ನಿತರರು ಉಪಸ್ಥಿತರಿದ್ದರು.