ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಕಾರಣ ಯಾರೆಂಬುದನ್ನು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ತಿಳಿಸಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ (ಏ.12) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 196/8 ರನ್ ಕಲೆಹಾಕಿದ್ದರೂ, ಹೀನಾಯ ಬೌಲಿಂಗ್ ಪ್ರದರ್ಶನ ಕಾರಣ ಸೋಲಿನ ಆಘಾತಕ್ಕೊಳಗಾಯಿತು.
ಜಯನಗರದಲ್ಲಿ ಕೋಟ್ಯಾಂತರ ಹಣ ಸೀಜ್ ಕೇಸ್ – ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು!?
ಈ ಬಗ್ಗೆ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ಆರ್ಸಿಬಿ ಪ್ರತಿ ಪಂದ್ಯದಲ್ಲಿ200ಕ್ಕೂ ಹೆಚ್ಚು ರನ್ ಸ್ಕೋರ್ ಮಾಡಲೇ ಬೇಕು. ಬೌಲಿಂಗ್ ನೆಚ್ಚಿಕೊಂಡರೆ ಮುಂದಿನ ಹಂತಕ್ಕೇರಲು ಸಾಧ್ಯವಿಲ್ಲ ಎಂದು ತಮ್ಮ ಬೌಲರ್ಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಐಪಿಎಲ್ 2024 ಟೂರ್ನಿಯಲ್ಲಿ ಆರ್ಸಿಬಿ ಈವರೆಗೆ ಆಡಿದ 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಪ್ಲೇ ಆಫ್ಸ್ ಆಸೆ ಜೀವಂತವಾಗಿ ಉಳಿಯಬೇಕಾದರೆ ಆರ್ಸಿಬಿ ತನ್ನ ಪಾಲಿನ ಬಾಕಿ ಉಳಿದ 8 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ತಂಡದ ಸಧ್ಯದ ಬೌಲಿಂಗ್ ಪ್ರದರ್ಶನ ಗಮನಿಸಿದರೆ ಈ ಬಾರಿ ನಾಕ್ಔಟ್ ಹಂತಕ್ಕೇರುವುದು ಬಹುತೇಕ ಅನುಮಾನ
ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದ ಎಲ್ಲ ಬೌಲರ್ಗಳು ಕೂಡ ಪ್ರರಿ ಓವರ್ನಲ್ಲಿ 10ಕ್ಕಿಂತ ಹೆಚ್ಚು ರನ್ಗಳನ್ನು ಹೊಡೆಸಿಕೊಂಡರು. ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಎಸೆದ 3 ಓವರ್ಗಳಲ್ಲಿ 37 ರನ್ ಕೊಟ್ಟರು. ಟೂರ್ನಿಯುದ್ದಕ್ಕೂ ಆರ್ಸಿಬಿ ಬೌಲರ್ಗಳ ಪ್ರದರ್ಶನ ಇದೇ ಮಾದರಿ ದಯನೀಯ ಸ್ಥಿತಿಯಲ್ಲಿದೆ.
ಬ್ಯಾಟಿಂಗ್ ವಿಭಾಗದಲ್ಲಿ ನಾವು ಪ್ರತಿ ಬಾರಿ 200ಕ್ಕೂ ಹೆಚ್ಚು ರನ್ಗಳನ್ನು ಗಳಿಸುವ ಅಗತ್ಯವಿದೆ. ಏಕೆಂದರೆ ನಮ್ಮ ಬೌಲಿಂಗ್ ವಿಭಾಗದಲ್ಲಿ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿಹಾಕುವ ಅಸ್ತ್ರಗಳು ಇಲ್ಲ. ಹೀಗಾಗಿ ಬ್ಯಾಟಿಂಗ್ ಒಂದನ್ನೇ ನೆಚ್ಚಿಕೊಂಡು ಆಡಬೇಕಿದೆ. ಬೌಲಿಂಗ್ ವಿಭಾಗದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯದ ಬೌಲರ್ಗಳಿಲ್ಲ. ಪವರ್ ಪ್ಲೇ ಓವರ್ಗಳಲ್ಲಿ 2-3 ವಿಕೆಟ್ಗಳನ್ನು ಪಡೆಯುವ ಅಗತ್ಯವಿದೆ. ಮೊದಲ 4 ಓವರ್ಗಳಲ್ಲೇ ನಮಗೆ ಹಿನ್ನಡೆ ಶುರುವಾಗುತ್ತದೆ ಎಂಬ ಅನುಭವವಾಗುತ್ತಿದೆ ಎಂದಿದ್ದಾರೆ.