ಕೊಪ್ಪಳ :– ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ತಾಂಡಾದಲ್ಲಿ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮ ಗೋಪುರು ಕುಸಿದಿರುವ ಘಟನೆ ಜರುಗಿದೆ.
ತಾಂಡಾದಲ್ಲಿರುವ ತುಳಜಾಭವಾನಿ ದೇವಸ್ಥಾನದ ಗೋಪುರಕ್ಕೆ ಇಂದು ಸಂಜೆ ಸಿಡಿಲು ಬಡೆದಿದ್ದು, ಗೋಪುರದ ಮೇಲ್ಬಾಗ ಸಂಪೂರ್ಣ ಕುಸಿದಿದೆ. ಗೋಪುರು ಕುಸಿದಿದ್ದರಿಂದ ಗ್ರಾಮದ ಜನರು ಆತಂಕ್ಕೊಳಗಾಗಿದ್ದಾರೆ.
ಕೊಪ್ಪಳದ ಹಲವಡೆ ಇಂದು ಗುಡುಗು-ಸಿಡಿಲು ಸಹಿತ ಅಬ್ಬರ ಮಳೆಯಾಗಿದೆ. ಭಾರೀ ಮಳೆಯಿಂದ ಈ ಅವಘಡ ಸಂಭವಿಸಿದೆ.