ಗದಗ:- ಪುತ್ರನಿಗೆ ಹಾವೇರಿ ಕ್ಷೇತ್ರದ ಟಿಕೆಟ್ ಸಿಗದ ಕಾರಣ ಬಿಜೆಪಿ ನಾಯಕರ ವಿರುದ್ಧವೇ ಸಿಡಿದೆದ್ದಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
RCB V/s MI: ಟಾಸ್ ವೇಳೆ RCB ಗೆ ಮೋಸ ವಾಗಿದ್ದು ನಿಜಾನಾ!? – ಇಲ್ಲಿದೆ ಫ್ಯಾಕ್ಟ್ ಚೆಕ್!
ಇದೇ ವಿಚಾರವಾಗಿ ಮಾಜಿ ಸಚಿವ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಬ್ಯರ್ಥಿ ಬಿ ಶ್ರೀರಾಮುಲು ಗದಗ್ ನಲ್ಲಿ ಮಾತನಾಡಿ, ನಾಮಪತ್ರ ಹಿಂಪಡೆಯಲು ಇನ್ನೂ ಸಮಯ ಇದೆ. ಈಶ್ವರಪ್ಪನವರನ್ನ ಮನವೊಲಿಸ್ತಾರೆ ಅನ್ನೋ ವಿಶ್ವಾಸ ಇದೆ. ಈಶ್ವರಪ್ಪನವರು ಬಿಜೆಪಿ ವಿರುಧ್ಧ ಯಾವಾಗಲು ನಡೆದುಕೊಂಡಿಲ್ಲ. ಈಶ್ವರಪ್ಪನವರನ್ನು ಎಲ್ಲ ಹಿರಿಯರು, ರಾಷ್ಟ್ರೀಯ ನಾಯಕರು ಅವರನ್ನು ಮನ ಒಲಿಸೋ ಕೆಲಸ ಮಾಡ್ತಾರೆ ಎಂದರು.