ಗದಗ:- ದಿಂಗಾಲೇಶ್ವರ ಶ್ರೀಗಳು ಧಾರವಾಡದಿಂದ ಚುನಾವಣೆಗೆ ನಿಲ್ಲುವ ವಿಚಾರವಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಬ್ಯರ್ಥಿ ಬಿ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ದಿಂಗಾಲೇಶ್ವರ ಶ್ರೀಗಳು ನಮ್ಮ ಗುರುಗಳು. ಪ್ರಲ್ಹಾದ್ ಜೋಶಿ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿಯವರಿಗೆ ಬಹಳ ಹತ್ತಿರವಾದಂತಹವರು ಪ್ರಲ್ಹಾದ್ ಜೋಶಿ. ಅಪಸ್ವರಗಳು ಹಾಗೂ ಬೇರೆ ಬೇರೆಯವರು ಚುನಾವಣೆಗೆ ನಿಲ್ಲಬೇಕು ಅನ್ನೋ ಸಮಯ. ನರೇಂದ್ರ ಮೋದಿಯವರು ಗಳಿಸಿದ ಪ್ರೀತಿ ಅಭಿಮಾನ. ಅವರ ಮುಖಾಂತರ ನಾವು ಮತ ಕೇಳೋ ಕೆಲಸ ಮಾಡ್ತೇವೆ. ದೇಶದಲ್ಲಿ ಈಗ ಮೋದಿ ಒಬ್ಬರೇ ಪ್ರಧಾನಿ ಆಗಬೇಕು ಅನ್ನೋದು. ಹೀಗಾಗಿ ಅವರ ಗೆಲುವಿಗೆ ಜೋಶಿ ಅವರಿಗೆ ಮತ ನೀಡಬೇಕು ಎಂದರು.
Janardhana Reddy: ಕೋಮುವಾದಿ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಪಕ್ಷ – ಶಾಸಕ ಜನಾರ್ದನ ರೆಡ್ಡಿ !
ಇನ್ನೂ ಸಣ್ಣಪುಟ್ಟ ವ್ಯತ್ಯಾಸಗಳು ಇರ್ತಾವೆ ಆದ್ರೂ ಕೂಡಾ ದಿಂಗಾಲೇಶ್ವರ ಶ್ರೀಗಳು ನಮ್ಮ ಗುರುಗಳು. ಅವರಿಗೆ ಸಣ್ಣ ಪುಟ್ಟ ನೋವಾಗಿದ್ರೆ ಎಲ್ಲರ ಪರವಾಗಿ ಅವರಿಗೆ ನಾನು ಕ್ಷಮೆ ಯಾಚನೆ ಮಾಡ್ತೇನೆ. ಚುನಾವಣೆಗೆ ನಿಲ್ಲಬೇಕು ನಿಲ್ಲಬಾರದು ಅನ್ನೋ ವಿಚಾರದಲ್ಲಿ ಧರ್ಮ ತೀರ್ಮಾನ ತಗೋಳತ್ತೆ ಎಂದರು.