ಬಳ್ಳಾರಿ: ತುಕಾರಾಂ ಪರ ನಾಮಪತ್ರ ಸಲ್ಲಿಸಿ ತೆರಳುವಾಗ ಕಾಂಗ್ರೆಸ್ ನಾಯಕರಿಗೆ ನೋಡಿ ಮೋದಿ ಮೋದಿ ಘೋಷಣೆ ಕೂಗಿದ ಪ್ರಸಂಗ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗದಲ್ಲಿ ನಡೆಯಿತು. ತುಕಾರಾಂ ಪರ ನಾಮಪತ್ರ ಸಲ್ಲಿಸಿ ಸಚಿವ ನಾಗೇಂದ್ರ, ಎಂಬಿ ಪಾಟೀಲ್, ಜಮೀರ್ ಅಹ್ಮದ್ ಸೇರಿ ಇತರೆ ನಾಯಕರು ತೆರಳುತಿದ್ದರು,
ಇದೇ ವೇಳೆ ಶ್ರೀರಾಮಲು ಪರ ನಾಮಪತ್ರ ಸಲ್ಲಿಸಲು ರೋಡ್ ಶೋ ಮೂಲಕ ಬಂದಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕರು ಬರುತಿದ್ದಂತೆ ಮೋದಿ ಮೋದಿ ಅಂತ ಘೋಷಣೆ ಕೂಗಿದ್ದಾರೆ. ನಂತರ ಬಿಜೆಪಿ ಕಾರ್ಯಕರ್ತರನ್ನ ಚದುರಿಸಿ ಕೈ ನಾಯಕರನ್ನ ಪೊಲೀಸರು ಕಳುಹಿಸಿಕೊಟ್ಟರು. ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿ ಮುಂದೆ ಭಾರೀ ಹೈಡ್ರಾಮಾ ನಡೆಯಿತು.