ಗದಗ: ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಿರೇಹಾಳ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಭರ್ಜರಿ ಪ್ರಚಾರ ನಡೆಸಿದರು. ಮತಯಾಚನೆ ಸಂದರ್ಭದಲ್ಲೇ ಮಳೆರಾಯನ ಆಗಮನವಾಗಿದ್ದು, ಊರಲ್ಲಿ ಮಳೆ ಬಂದಿರುವುದು ಶುಭ ಸೂಚನೆ ಎಂದು ಬೊಮ್ಮಾಯಿ ಹೇಳಿದರು. ಗುಡುಗು ಸಿಡಿಲು ಕಾಂಗ್ರೆಸ್ ಗೆ , ಮುಖ್ಯಮಂತ್ರಿಗೆ ಮಳೆಹನಿ ನರೇಂದ್ರ ಮೋದಿಗೆ ಆದ್ದರಿಂದ ಕಾಂಗ್ರೆಸ್ ಬಂದ್ರೆ ಬರಗಾಲ ಗ್ಯಾರಂಟಿ,
ಭ್ರಷ್ಟಾಚಾರ ಗ್ಯಾರಂಟಿ ಮಳೆ ಬರೋ ಲಕ್ಷಣ ಅಂದ್ರೆ ಮೋದಿ ಸರಕಾರ, ಬಿಜೆಪಿ ಸರಕಾರ ೆಮದು ಹೇಳಿದರು. ನಾನು ಮತ್ತೊಮ್ಮೆ ನಿಮ್ಮೂರಿಗೆ ಬಂದು ನಿಮ್ಮ ಜೊತೆಗಿದ್ದು, ಭಾಷಣ ಮಾಡಿ, ನಿಮ್ಮ ಸಮಸ್ಯೆಗಳನ್ನು ಆಲಿಸ್ತೇನೆ. ನಿಮ್ಮೂರಲ್ಲೇ ಚಹಾ ಕುಡೀತೇನೆ ಎಂದರು. ಪ್ರಚಾರಕ್ಕೆ ಬೊಮ್ಮಾಯಿಗೆ ಮಾಜಿ ಶಾಸಕ ಕಳಕಪ್ಪ ಬಂಡಿ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಕಾರ್ಯಕರ್ತರು ಸಾಥ್ ನೀಡಿದರು.