ಕೋಲಾರ : ಕ್ಷುಲ್ಲಕ ವಿಚಾರಕ್ಕೆ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಮಗನ ಮೇಲೆ ಗಂಭೀರ ಹಲ್ಲೆ ಮಾಡಿರುವ ಘಟನೆ ಕೋಲಾರ ತಾಲ್ಲೂಕಿನ ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿಯ ಮುನೇಶ್ವರ ದೇವಾಲಯ ಬಳಿ ಘಟನೆ, ನಡೆದಿದೆ ಪಾಪರಾಜನಹಳ್ಳಿ ಗ್ರಾಮದ ಬಳಿ ಇರುವ ಮುನೇಶ್ವರ ದೇವಾಲಯದಲ್ಲಿ ಪ್ರತಿದಿನ ಬೆಳಿಗ್ಗೆ ಸಂಜೆ ಧ್ವನಿವರ್ಧಕ ಸೌಂಡ್ ಹೆಚ್ಚು ಮಾಡುತ್ತಿದ್ದರು,
ಇಂದು ಬೆಳಿಗ್ಗೆ ಧ್ವನಿವರ್ಧಕ ಸೌಂಡ್ ಕಡಿಮೆ ಮಾಡಿ ಓದಲು ತೊಂದರೆ ಆಗುತ್ತೆ ಎಂದು ಹೇಳಿದ ಕೋಟಿಗಾನಹಳ್ಳಿ ರಾಮಯ್ಯ,ಕೋಟಿಗಾನಹಳ್ಳಿ ರಾಮಯ್ಯ ಬುಡ್ಡಿ ದೀಪದಲ್ಲಿ ಇರಬಾರದು ಎಂದು ಗಲಾಟೆ ಮಾಡಿ ಕಣ್ಣು ಹಾಗೂ ತಲೆಗೆ ಗಂಭೀರವಾಗಿ ಹಲ್ಲೆ ಮಾಡಿದ ಮಂಜುನಾಥ್, ಬೈರಪ್ಪ, ಸುಬ್ಬು ಸೇರಿದಂತೆ ಇತರರು,
ಗಂಭೀರವಾಗಿ ಹಲ್ಲೆಗೆ ಒಳಗಾದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಮಗ ಮೇಘಾವರ್ಷ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ, ಪಡೆದಿದ್ದಾರೆ ಹಲ್ಲೆ ಮಾಡಿದ ಮಂಜುನಾಥ್ ರನ್ನು ಗ್ರಾಮಾಂತರ ಪೊಲೀಸರು, ಬಂಧಿಸಿದ್ದಾರೆ . ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ವ್ಯಾಪಕ ಖಂಡನೆ ರಾಮಯ್ಯ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡುವಂತೆ ಒತ್ತಾಯ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ,