ಕೊಪ್ಪಳ: ಕಾಂಗ್ರೆಸ್ ಯಾವಾಗ ಬರುತ್ತದೆ ಅವಾಗ ಬರಗಾಲ ಬರುತ್ತದೆ. ಕಾಂಗ್ರೆಸ್ ನ ಕಾಲ್ಗುಣನೋ ಏನೂ ಈಗ ಬರಗಾಲ ಬಂದಿದೆ ಎಂದು ಕೊಪ್ಪಳದಲ್ಲಿ ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಬಂದಾಗ ಯಡಿಯೂರಪ್ಪ ಒಬ್ಬರೇ ಪ್ರವಾಸ ಮಾಡಿದರು.
ಸಂಕಷ್ಟದಲ್ಲಿದ್ದ ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡಿದರು. ಕೇಂದ್ರ ಸರಕಾರದ ಅನುದಾನಕ್ಕೆ ಕಾಯಲಿಲ್ಲ, ಇವತ್ತು ಈ ಸರಕಾರ ಬರಗಾಲ ಇದ್ದರೂ ಪರಿಹಾರ ನೀಡುತ್ತಿಲ್ಲ. ಸಮಯ ವ್ಯರ್ಥ ಮಾಡುತ್ತಿದೆ,ಇದು ಸಂಪೂರ್ಣ ರೈತ ವಿರೋಧಿ ಸರಕಾರ ಆದ್ದರಿಂದ ಈ ಸರಕಾರ ಕಿತ್ತೊಗೆಯಬೇಕೆಂದರು.
ಇನ್ನೂ ಮೋದಿ ಯುವಕರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಸಚಿವ ಶಿವರಾಜ ತಂಗಡಗಿ ಮೋದಿ ಎನ್ನುವರ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದ್ದಾರೆ. ತಂಗಡಗಿ ಅವರೇ ಬಸವಣ್ಣನವರ ನಾಡಿನವರು, ಈ ಮಾತನ್ನು ಕೇಳಿದರೆ ನೀವು ಬಸವಣ್ಣ ನಾಡಿನವರು ಹೌದೋ ಅಲ್ಲವೋ ಎನ್ನುವ ಪ್ರಶ್ನೆ ಬರುತ್ತದೆ ಎಂದು ಹೇಳಿದರು.