ಲಕ್ನೋ: ಸಮಾಜದ ಭದ್ರತೆಗೆ ಯಾರೇ ಧಕ್ಕೆ ತಂದರೂ ಅವರ ‘ರಾಮ ನಾಮ ಸತ್ಯ’ (ಅಂತ್ಯಸಂಸ್ಕಾರ) ನಿಶ್ಚಿತ ಎಂದು ಕ್ರಿಮಿನಲ್ಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಎಚ್ಚರಿಕೆ ನೀಡಿದ್ದಾರೆ. ಅಲಿಗಢದಲ್ಲಿ ಬಿಜೆಪಿಯ (BJP) ಲೋಕಸಭಾ ಅಭ್ಯರ್ಥಿ ಸತೀಶ್ ಕುಮಾರ್ ಗೌತಮ್ ಪರ ಬೃಹತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು,
ಹೆಣ್ಣುಮಕ್ಕಳು ಮತ್ತು ವ್ಯಾಪಾರಸ್ಥರು ಆತಂಕವಿಲ್ಲದೆ ರಾತ್ರಿಯಲ್ಲಿ ಹೊರಗೆ ಹೋಗಬಹುದು ಎಂದು ಯಾರೂ ಯೋಚಿಸಿರಲಿಲ್ಲ. ಹೆಣ್ಣುಮಕ್ಕಳು ಮತ್ತು ಉದ್ಯಮಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುವವರಿಗೆ ನಾವು ‘ರಾಮ್ ನಾಮ್ ಸತ್ಯ’ (ಅಂತ್ಯ ವಿಧಿಗಳನ್ನು ಮಾಡಲಾಗುತ್ತದೆ) ಖಾತ್ರಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ನಾವು ಭಗವಾನ್ ರಾಮನ ಹೆಸರನ್ನು ಜಪಿಸುತ್ತಾ ನಮ್ಮ ಜೀವನವನ್ನು ನಡೆಸುತ್ತೇವೆ. ರಾಮನಿಲ್ಲದೆ ಯಾವುದೂ ಸಾಧ್ಯವಿಲ್ಲ. ಆದರೆ ಯಾರಾದರೂ ಸಮಾಜದ ಭದ್ರತೆಗೆ ಧಕ್ಕೆ ತಂದರೆ ‘ರಾಮ ನಾಮ ಸತ್ಯ’ ಕೂಡ ನಿಶ್ಚಿತ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
PUC ಮತ್ತು SSLC ಪಾಸಾದವರಿಗೆ ನವೋದಯ ವಿದ್ಯಾಲಯದಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅರ್ಜಿ ಸಲ್ಲಿಸಿ
ಚುನಾವಣೆ ಕುರಿತು ಮಾತನಾಡಿದ ಅವರು, 10 ವರ್ಷಗಳ ಹಿಂದೆ ಕಂಡ ಕನಸು ಈಗ ನನಸಾಗುತ್ತಿದೆ. ಅದು ನಿಮ್ಮ ಮತದ ಮೌಲ್ಯದಿಂದ ನಡೆಯುತ್ತಿದೆ. ತಪ್ಪಾಗಿ ಹಾಕುತ್ತಿದ್ದ ಮತವು ದೇಶವನ್ನು ಭ್ರಷ್ಟಾಚಾರದ ಆಳಕ್ಕೆ ಕೊಂಡೊಯ್ಯುತ್ತಿತ್ತು. ಮೊದಲು ಅರಾಜಕತೆ, ಕರ್ಫ್ಯೂ ಮತ್ತು ಕಾನೂನುಬಾಹಿರತೆ ಇತ್ತು. ಹೆಣ್ಣುಮಕ್ಕಳು, ನಮ್ಮ ಯುವಕರು ಹೊರಗಡೆ ಓಡಡಲು ಹೆದರುತ್ತಿದ್ದರು ಎಂದು ಕಾಂಗ್ರೆಸ್ ಆಡಳಿತವನ್ನು ಟೀಕಿಸಿದ್ದಾರೆ.
ನೀವು ಮೋದಿಜಿಗೆ ನಿಮ್ಮ ಮತವನ್ನು ನೀಡಿದಾಗ, ಅದು ಮೋದಿಜಿಯವರ ಹೆಸರಿನಲ್ಲಿದೆ. ನಿಮ್ಮ ಭವಿಷ್ಯದ ಭರವಸೆಯನ್ನು ನೀವು ಖಾತರಿಪಡಿಸಿದ್ದೀರಿ. ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ರಕ್ಷಣಾ ಕಾರಿಡಾರ್ಗಳು, ವೈದ್ಯಕೀಯ ಕಾಲೇಜುಗಳು ಅಥವಾ ವಿಶ್ವವಿದ್ಯಾನಿಲಯಗಳೆಲ್ಲವೂ ಮೋದಿ ಆಡಳಿತದಲ್ಲಿ ಆಗುತ್ತಿದೆ ಎಂದು ಬಣ್ಣಿಸಿದ್ದಾರೆ.