ಬೆಂಗಳೂರು:- ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಭೇಟಿ ಮಾಡಿದ್ದಾರೆ.
ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಯಡಿಯೂರಪ್ಪ ಭೇಟಿ ಮಾಡಿದ ಸುಧಾಕರ್ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.
ಡ್ರಾಪ್ ಪಡೆದು ರ್ಯಾಪಿಡೋ ಬೈಕ್ ಚಾಲಕನಿಂದ ಹಣ ದೋಚಿದ ಕಿಡಿಗೇಡಿಗಳು!
ಭೇಟಿ ಬಳಿಕ ಮಾತನಾಡಿದ ಸುಧಾಕರ್, ಚುನಾವಣಾ ಕಾವು ದಿನೇ ದಿನೆ ಹೆಚ್ಚಾಗ್ತಿದೆ. ಯುಗಾದಿ ಹೊಸದಡಕು ಇದಿದ್ರಿಂದ ನಾಯಕರು ಹೊರ ಬಂದು ಕೆಲಸ ಮಾಡೊದು ಕಷ್ಟ. ಯಡಿಯೂರಪ್ಪನವರನ್ನ ಭೇಟಿ ಮಾಡಿ ಹಬ್ಬದ ಶುಭಾಶಯ ತಿಳಿಸಿದ್ದೇನೆ. ನಮ್ಮ ಕ್ಷೇತ್ರದ ಅಗುಹೋಗುಗಳನ್ನ ಅವರೊಂದಿಗೆ ಚರ್ಚೆ ಮಾಡಿದ್ದೇಬೆ. ಅವರು ಕೂಡ ನಮ್ಮ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡೊದಾಗಿ ಹೇಳಿದ್ದಾರೆ. ಮೋದಿಯವರ ಮತ್ತೆ ಯಾವಾಗ ಬರ್ತಾರೆ ಎನ್ನೊದು ಗೊತ್ತಿಲ್ಲ. ಕರ್ನಾಟಕಕ್ಕೆ ಇನ್ನು ಮೂರ್ನಾಲ್ಕುಬಾರಿ ಮೊದಿಯವರು ಬರುವವರಿದ್ದಾರೆ ಎಂದರು.
ಬಳಿಕ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಉತ್ತಮ ವಾತಾವರಣ ಇದೆ. ಕರ್ನಾಟಕದಲ್ಲಿ 28ಕ್ಕೆ 28 ಗೆಲ್ಲೋದಾಗಿ ಈಗಾಗಲೇ ಹೇಳಿದ್ದೇನೆ. ಗೆದ್ದು ದೆಹಲಿಗೆ ಹೊಗ್ತೇನೆ ಎಂದು ಹೇಳಿದ್ದೆ. ಉತ್ತಮ ವಾತಾವರಣ ಇದೆ 28ಕ್ಷೇತ್ರ ಗೆದ್ದು ಮೊದಿಯವರ ಕೈ ಬಲ ಪಡಿಸ್ತೇವೆ. 28ಕ್ಷೇತ್ರ ಗೆದ್ದು ಕರ್ನಾಟಕದ ಕೊಡುಗೆಯನ್ನ ಕೊಡ್ತೇವೆ. ಬರ ಪರಿಹಾರ ,ಸಂಸದರು ಕನ್ನಡಿಗರ ಪರ ಮಾತನಾಡ್ತಿಲ್ಲ ಎನ್ನೊ ಆರೋಪಕ್ಕೆ. ವಿಪಕ್ಷದವರ ಯಾವ ಹೇಳಿಕೆಗೂ ನಾನು ಉತ್ತರ ಕೊಡಲ್ಲ. ಚುನಾವಣೆ ಫಲಿತಾಂಶದ ನಂತರ ನಾನು ಮಾತನಾಡ್ತೇನೆ ಎಂದರು.