ಕೊಪ್ಪಳ:- ಗ್ಯಾರಂಟಿ ಯೋಜನೆಯನ್ನ ನಿಲ್ಲಿಸ್ತೇನೆ ಎಂದು ಕಾಂಗ್ರೆಸ್ ಹೇಳಿದರೆ ಬಿಡಲ್ಲ. ಸಿಎಂ ಮತ್ತು ಡಿಸಿಎಂ ರನ್ನು ಬೀದಿಗೆ ತಂದು ಕೇಳ್ತೇವೆ ಎಂದು ಜನಾರ್ಧನ್ ರೆಡ್ಡಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
Bengaluru: ಸಿಲಿಕಾನ್ ಸಿಟಿ ಅಪಾರ್ಟ್ ಮೆಂಟ್ ಗಳಿಗೆ ತಪ್ಪದ ಜಲಸಂಕಷ್ಟ!
ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, ಗ್ಯಾರಂಟಿ ಹೆಸರಲ್ಲಿಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದೀಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸ್ತೇನೆ ಅನ್ನೋಕೆ ಹೇಗೆ ಬರುತ್ತದೆ? ಇದು ಲೋಕಸಭಾ ಚುನಾವಣೆ ರಾಜ್ಯದ ಚುನಾವಣೆ ಅಲ್ಲ. ಸೋನಿಯಾ ಗಾಂಧಿ ಸೋಲ್ತೇನೆ ಅಂತ ತಿಳಿದು ರಾಜ್ಯಸಭೆಗೆ ಹೋಗಿದ್ದಾರೆ. ರಾಹುಲ್ ಗಾಂಧಿಗೆ ಕೂಡಾ ಮತ್ತೆ ಗಲ್ಲುತ್ತೇನೋ ಇಲ್ವೋ ಅನ್ನೋ ಗಾಬರಿ ಇದೆ. ಪಲ್ಲಕ್ಕಿಯಲ್ಲಿ ದೇವರ ಮೂರ್ತಿಯಿದ್ದರೆ ನಾವು ಕೈ ಮುಗಿಯುತ್ತೇವೆ, ಬಿಜೆಪಿ ಪಲ್ಲಕ್ಕಿಯಲ್ಲಿ ಮೋದಿ ಅನ್ನೋ ಮೂರ್ತಿಯಿದೆ. ಆದ್ರೆ ಕಾಂಗ್ರೆಸ್ ಪಲ್ಲಕ್ಕಿಯಲ್ಲಿ ಯಾರ ಮೂರ್ತಿಯೂ ಇಲ್ಲ. ಕಾಂಗ್ರೆಸ್ ಗೆ ತಮ್ಮ ಪ್ರಧಾನಿ ಅಭ್ಯರ್ಥಿ ಅಂತ ಘೋಷಿಸಲು ಧೈರ್ಯವಿಲ್ಲ ಎಂದ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.