ಶಿವಮೊಗ್ಗ: ಈಶ್ವರಪ್ಪ ಅವರಿಗೆ ಇನ್ನು ಕಾಲ ಮಿಂಚಿಲ್ಲ. ಕೈಜೋಡಿಸಿ ವಿನಂತಿಸುತ್ತೇನೆ. ನಿಮ್ಮ ಸಮಸ್ಯೆಗಳೇನಿದ್ದರೂ ದಿಲ್ಲಿ ಜೊತೆ ಮಾತನಾಡಿ, ನಾವಂತೂ ನಿಮ್ಮ ಜತೆ ಇರುತ್ತೇನೆ. ನೀವು ಸಹ ನಮ್ಮೊಂದಿಗಿರಬೇಕು ಎಂಬುದು ನಮ್ಮ ಆಸೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಬಿಜೆಪಿ ಪಕ್ಷ ಕಟ್ಟುವಲ್ಲಿಈಶ್ವರಪ್ಪ ಅವರ ಕೊಡುಗೆ ಅಪಾರವಾಗಿದೆ. ಅವರು ಹರಿಯರು, ಯಾವುದೋ ಪರಿಸ್ಥಿತಿ ಈ ಸನ್ನಿವೇಶಕ್ಕೆ ದೂಡಿದೆ. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಮಂತ್ರಿ ಆಗಲು ಪಕ್ಷ ದ ಹಿತದೃಷ್ಟಿಯಿಂದ ಕೈಜೋಡಿಸಬೇಕು ” ಎಂದು ಕೋರಿದರು.
ರಾಘವೇಂದ್ರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರು ಈ ಸಲ ಎರಡು ಲಕ್ಷದ ಅಂತರದಲ್ಲಿಗೆ ಲ್ಲುವ ನಿರೀಕ್ಷೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ರಾಜ್ಯದಲ್ಲಿಇನ್ನೂ ನಾಲ್ಕೈದು ಸಲ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ. ಯೋಗಿ ಆದಿತ್ಯನಾಥ್ ಸಹ ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.