ಕಲಬುರ್ಗಿ:- ಆಳಂದ ಹೊರವಲಯದಲ್ಲಿ ಜಗಳ ಬಿಡಿಸಲು ಹೋದ ಪೊಲೀಸ್ ಪೊಲೀಸ್ ಪೇದೆ 8 ಜನರಿಂದ ಹಲ್ಲೆ ನಡೆದ ಘಟನೆ ಜರುಗಿದೆ.
ಆಳಂದ ಠಾಣೆ ಪೊಲೀಸ್ ಪೇದೆ ಹಲ್ಲೆಗೊಳಗಾದವರು ಎನ್ನಲಾಗಿದೆ. ಆಳಂದ ಹೊರವಲಯದ ಚಿಲ್ಲಾಳ ಪೆಟ್ರೋಲ್ ಪಂಪ್ ಬಳಿ ಬೊಲೆರೊ ಹಾಗೂ ಆಟೋ ಮಧ್ಯೆ ಅಪಘಾತವಾಗಿತ್ತು. ಅಪಘಾತ ಸ್ಥಳಕ್ಕೆ ಪೊಲೀಸ್ ಪೇದೆ ತೆರಳಿದ್ದರು. ಪ್ರಕರಣ ಬಗೆಹರಿಸಿ ಗಣಪತ್ರಾವ್ ಘಂಟೆ ಠಾಣೆಗೆ ತೆರಳುತ್ತಿರುವ ವೇಳೆ ಸ್ಥಳಕ್ಕೆ ನಿಪ್ಪಾಣಿ ತಾಂಡಾ ಗ್ಯಾಂಗ್ ಬಂದಿದ್ದು, ಟಂಟಂ ಆಟೋದವನ ಜೊತೆ ಗಲಾಟೆ ಆರಂಭಿಸಿದೆ. ಈ ಜಗಳ ಬಿಡಿಸಲು ಹೋದ ಪೊಲೀಸ್ ಪೊಲೀಸ್ ಪೇದೆ ಗಣಪತ್ರಾವ್ ಘಂಟೆ ಮೇಲೆ ನಿಪ್ಪಾಣಿ ತಾಂಡಾ ಗ್ಯಾಂಗ್ನ ನಿಖಿಲ್, ಕರ್ಣ್ ಸೇರಿದಂತೆ ಎಂಟು ಜನರು ಹಲ್ಲೆ ಮಾಡಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಆರು ಜನ ಯುವಕರು ಪರಾರಿಯಾಗಿದ್ದಾರೆ.