ಬಳ್ಳಾರಿ: ಲೋಕಸಭೆ ಬಳ್ಳಾರಿ ಅಭ್ಯರ್ಥಿ ಇ.ತುಕರಾಂ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಇಂದು ಕಾಂಗ್ರೇಸ್ ಅವರು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಇತಿಹಾಸ ಸೃಷ್ಟಿ ಮಾಡಿದವರು ಅಂದ್ರೆ ಅದು ಕಾಂಗ್ರೆಸ್, ಇತಿಹಾಸ ಮರೆತವರು, ಗೊತ್ತಿಲ್ಲದವರು ಅಂದ್ರೆ ಅದು ಬಿಜೆಪಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ ಎಂದು ಇ ತುಕಾರಾಂ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಕೆಲ್ಸಾ,ಇತಿಹಾಸವನ್ನ ಯಾಕೆ.? ನೆನಪು ಮಾಡುತ್ತೆವೆ ಅಂದ್ರೆ ಕಾಂಗ್ರೆಸ್ ಪಕ್ಷ ಮಾಡಿದ ಕೆಲಸಕ್ಕೆ ಜನ ಋಣ ತೀರಿಸ ಬೇಕು, ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಪಾಲು – ಸಮಬಾಳು ಅಂತಾ ಹೇಳುತ್ತೆ, ಆದ್ರೆ ಬಿಜೆಪಿ ಅವರು ಇದನ್ನ ವಿರೋಧ ಮಾಡುತ್ತಾರೆ ಎಂದು ಕಿಡಿಕಾರಿದರು.