ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪಟ್ಟಣದ ಪೇಟೆಯ ಲ್ಲಿರುವ ವಿಠ್ಠಲ ಮಂದಿರದ ಹತ್ತಿರ ನಗರಸಭೆ ಬೋರವೆಲ್ ನಿಂದ ನೀರು ತರಲು ಹೋಗಿದ ಯುವತಿ ಮುಂಜಾನೆ 9 ರ ವೇಳೆ ವಿದ್ಯುತ್ ಪ್ರವಹಿಸಿ ಯುವತಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ, ಅವರು ಬನಹಟ್ಟಿಯ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ರಾಮಪೂರದ ನಿವಾಸಿಗಳ ಶೃತಿ ಹಾಸಿಲಕರ,(30) ವಿದ್ಯುತ್ ಆಘಾತಕ್ಕೆ ಒಳಗಾದರು ಎಂದು ತಿಳಿದು ಬಂದಿದೆ,
ರಬಕವಿ ಬನಹಟ್ಟಿ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಮಹಿಳೆಗೆ ವಿದ್ಯುತ್ ಶಾಕ್ ಆಗಿದೆ. ವಿದ್ಯುತ್ ಪ್ರವಹಿಸಿ ಯುವತಿಯನ್ನು ಗಮನಿಸಿದ ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ, ನಗರಸಭೆ ವತಿಯಿಂದ ಚಿಕಿತ್ಸೆ ವೆಚ್ಚ ಪಾವತಿಸಲಾಗುವುದು ಎಂದು ಪೌರಾಯುಕ್ತರು ಹೇಳಿದ್ದಾರೆ,
ಪ್ರಕಾಶ ಕುಂಬಾರ
ಬಾಗಲಕೋಟೆ