ನಿವೃತ ಶಿಕ್ಷಕ ಶ್ರೀ ಎಂ ಎಸ ಮುನ್ನೋಳ್ಳಿ ಅವರ ಅಭಿಮಾನಿ ಬಳಗದ ವತಿಯಿಂದ ಕಾಯಕ ಯೋಗಿ ಶ್ರೀ ಎಂ ಎಸ್ ಮುನ್ನೋಳಿಯವರ 98 ನೇ ಜನ್ಮ ದಿನೋತ್ಸವ ಸಮಾರಂಭದ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಬಂಗಾರೆವ್ವ ತಟ್ಟಿಮನಿ ಸಮುದಾಯ ಭವನದಲ್ಲಿ ಉತ್ತಮ ಶಿಕ್ಷಕರಿಗೆ ಕಾಯಕ ಯೋಗಿ ಪ್ರಶಸ್ತಿ ಪ್ರಧಾನ ಸಮಾರಂಭವು ಜರುಗಿತು.
ನಗರದ ಸರ್ಕಾರಿ ಪ ಪೂ ಕಾಲೇಜು ಪ್ರೌಢ ವಿಭಾಗದ ಗಣಿತ ಸಹ ಶಿಕ್ಷಕಿಯಾದ ಭುವನೇಶ್ವರಿ ಖವಾಸಿ ( ಜಂಬಗಿ) ಇವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಕಾಯಕ ಶ್ರೀ ಪ್ರಶಸ್ತಿಯನ್ನು ರಬಕವಿಯ ಪ ಪೂ ಶ್ರೀ ಗುರುಸಿದ್ದೇಶ್ವರ ಶ್ರೀಗಳು ಸನ್ಮಾನಿಸಿ ಗೌರವಿಸಿದರು, ಈ ಸಂದರ್ಭದಲ್ಲಿ ಎಂ ಎಸ್ ಮುನ್ನೋಳಿ ಅಭಿಮಾನಿ ಬಳಗದ ಅಧ್ಯಕ್ಷ ಶ್ರೀಶೈಲ ದಬಾಡಿ,ಆಯ್ ಆರ್ ಮಠಪತಿ,ಡಾ, ಶ್ರೀನಿವಾಸ ಬಳ್ಳಿ,ಸುರೇಶ ಕೋಲಾರ,ಎಸ್ ಬಿ ಹಾವಿನಾಳ,ಪ್ರೊ ವೈ ಬಿ ಕೊರಡೂರ, ಬೊರಮ್ಮ ಬಾಗಲಕೋಟ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ