ತುಮಕೂರು:- ಲೋಕಸಭಾ ಚುನಾವಣೆ ಹಿನ್ನೆಲೆ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು ದಾಖಲೆ ಇಲ್ಲದ 4 ಲಕ್ಷದ 80 ಸಾವಿರ ಹಣ ಸೀಜ್ ಮಾಡಿದ್ದಾರೆ.
ಕಾಂಗ್ರೆಸ್ ನಲ್ಲೂ ಬಂಡಾಯದ ಬಿಸಿ – ಕೋಲಾರದಲ್ಲಿ ಪ್ರಚಾರಕ್ಕೆ ಬಾರದ ಸಚಿವ ಕೆಎಚ್ ಮುನಿಯಪ್ಪ
ಬೈಕ್ ನಲ್ಲಿದ್ದ ತೆರಳುತ್ತಿದ್ದವರ ಬ್ಯಾಗ್ ಪರಿಶೀಲನೆ ವೇಳೆ ಹಣ ಪತ್ತೆ ಆಗಿದೆ. ಮಧುಗಿರಿಯ ಸಾಲುಮರದ ತಿಮ್ಮಕ್ಕ ಉದ್ಯಾನವನ ಚೆಕ್ ಪೊಸ್ಟ್ ಬಳಿ ಪತ್ತೆಯಾಗಿದೆ.
ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಬ್ಯಾಗ್ ನಲ್ಲಿ ಹಣ ಪತ್ತೆಯಾಗಿದ್ದು, ಖಾಸಗಿ ಬ್ಯಾಂಕ್ ಗೆ ಸೇರಿದ ಹಣ ಎಂದು ಹೇಳಲಾಗುತ್ತಿದೆ..
ಸದ್ಯ 4 ಲಕ್ಷ 80 ಸಾವಿರ ಹಣವನ್ನ ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು, ಘಟನೆ ಸಂಬಂಧ
ತನಿಖೆ ಮುಂದುವರಿಸಿದ್ದಾರೆ.