ಮಂಡ್ಯ :- ಅಕ್ರಮ ಗೋ ಮಾಂಸ ಸಾಗಿಸುತ್ತಿದ್ದ ವಾಹನ ಪಲ್ಟಿ ಹೊಡೆದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಬಳಿ ಜರುಗಿದೆ.
ವಾಹನ ಪಲ್ಟಿ ಹೊಡೆದ ಹಿನ್ನೆಲೆ ಗೋಮಾಂಸ ಚೆಲ್ಲಾಡಿದೆ. ಬೆಂಗಳೂರು ಕಡೆ ಬೊಲೆರೋ ಗೂಡ್ಸ್ ವಾಹನ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿಯೆ ವಾಹನ ಪಲ್ಟಿ ಹೊಡೆದಿದೆ. ವಾಹನ ಪಲ್ಟಿಯಾಗ್ತಿದ್ದಂತೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋಮಾಂಸ ರಸ್ತೆಗೆ ಬಿದ್ದಿದೆ. ಕೂಡಲೇ ಸ್ಥಳಕ್ಕೆ ಮದ್ದೂರು ಠಾಣಾ ಪೊಲೀಸರ ಆಗಮಿಸಿ ಪರಿಶೀಲಿಸಿದ್ದಾರೆ.
ಗೋಮಾಂಸವನ್ನ ಎಲ್ಲಿಗೆ ಸಾಗಿಸಲಾಗ್ತಿತ್ತು ಎಂದು ತನಿಖೆ ನಡೆಸುತ್ತಿದ್ದಾರೆ. ಹಿಂದು ಜಾಗತಣ ವೇದಿಕೆ ರಾಜ್ಯ ಪ್ರಮುಖ್ ಯೋಗಾನಂದ್ ಭೇಟಿ ನೀಡಿ, ಅಕ್ರಮವಾಗಿ ಗೋಮಾಂಸ ದಂಧೆ ನಡೆಸ್ತಿರುವವರ ವಿರುದ್ದ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.