ವಿಜಯಪುರ:– ಇಂಡಿ ಶಾಖಾ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ಬಿಜೆಪಿ ಮುಖಂಡರ ಜಗಳ -ಪ್ರಚಾರಕ್ಕೆ ಬಂದಿದ್ದ ಸಂಸದ ಸಿದ್ದೇಶ್ವರ್ ವಾಪಾಸ್ !
ಚಡಚಣ ತಾಲೂಕಿನ ಕೊನೆಯ ಭಾಗದ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಝಳಕಿ ಪಟ್ಟಣದ ಕೆಬಿಜೆಎನ್ಎಲ್ ಕಚೇರಿಗೆ ಮುತ್ತಿಗೆ ಹಾಕಿ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಇಂಡಿ ಶಾಖಾ ಕಾಲುವೆಯ ನಾರಾಯಣಪುರ ಎಡದಂಡೆ ಕಾಲುವೆಗೆ 130 ಕಿಲೋ ಮಿಟರ್ ದಿಂದ 172 ಕಿಲೋ ಮೀಟರ್ ವರೆಗರ ನೀರು ಹರಿಸುವಂತೆ ಒತ್ತಾಯ ಮಾಡಿದ್ದಾರೆ.
ಕೂಡಲೇ ಸ್ಥಳಕ್ಕೆ ಇಂಡಿ ತಹಶಿಲ್ದಾರ ಮಂಜುಳಾ ನಾಯಕ ಭೇಟಿ ನೀಡಿ ಮೇಲಾಧಿಕಾರಿಗಳ ಗಮನಕ್ಕೆ ತಂದು ನೀರು ಹರಿಸುವ ಭರವಸೆಯನ್ನು ರೈತರಿಗೆ ನೀಡಿದ್ದಾರೆ.