ಬೆಂಗಳೂರು:- ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ, ಡಿಕೆ ನೋಟು ಡಾಕ್ಟ್ರಿಗೆ ವೋಟು ನಮ್ಮ ಸ್ಟ್ರಾಟಿಜಿ ಅಗಿದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನಗೆ ಚಟಾಕಿ ಹಾರಿಸಿದ್ದಾರೆ.
Skin Tan: ಸುಲಭವಾಗಿ ಚರ್ಮದ ಟ್ಯಾನ್ ತೆಗೆಯಬೇಕಾ? ಈ ಐದು ಟಿಪ್ಸ್ ಫಾಲೋ ಮಾಡಿ!
ಡಾ ಮಂಜುನಾಥ್ ಅವರು ಈಗಾಗಲೇ ಕ್ಷೇತ್ರದೆಲ್ಲೆಡೆ ಓಡಾಡಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಭೇಟಿಯಾಗುವ ಮೂಲಕ ವಿದ್ಯುತ್ ಸಂಚಲನ ಮೂಡಿಸಿದ್ದಾರೆ. ಡಾ ಮಂಜುನಾಥ್ ಮತ್ತು ಬಿಜೆಪಿ ಗೆಲ್ಲಬೇಕು ಹಾಗೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಭಾವನೆ ಇಟ್ಟುಕೊಂಡಿರುವ ಅನೇಕ ಯುವಕರು ಡಾಕ್ಟರ್ ಜೊತೆ ಸೇರುತ್ತಿದ್ದಾರೆ, ಅವರ ಅವಶ್ಯಕತೆ ರಾಜ್ಯಕ್ಕಿದೆ ಎಂಬ ಅಂಶವನ್ನು ಜನ ಮನಗಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಕ್ಷೇತ್ರದಲ್ಲಿ ದೊಡ್ಡಮಟ್ಟದ ಪ್ರಚಾರ ನಡೆಯುತ್ತಿದೆ ಎಂದ ಕುಮಾರಸ್ವಾಮಿ ತಮ್ಮ ಚುನಾವಣಾ ಸ್ಟ್ರಾಟಿಜಿಯನ್ನು ಪರಿಷ್ಕರಿಸಿ ‘ಡಿಕೆ ನೋಟು ಡಾಕ್ಟ್ರಿಗೆ ವೋಟು’ ಅಗಿದೆ ಎಂದರು.