ತುಮಕೂರು: `ಈ ಹಿಂದೆ ಯಡಿಯೂರಪ್ಪರನ್ನು ದೇವೇಗೌಡರು ಕೆಟ್ಟದಾಗಿ ಬೈದಿದ್ದರು. ದೇವೇಗೌಡರನ್ನು ಸೋಲಿಸಿದವರನ್ನೇ ಪಕ್ಕದಲ್ಲಿ ಕುರಿಸಿಕೊಂಡು ನನ್ನ ಸೋಲಿಸಿದವರನ್ನು ಸೋಲಿಸಿ ಎಂದು ದೇವೇಗೌಡರು ಹೇಳ್ತಾರೆ ಅಲ್ವಾ ?’ ಎಂದು ಸಚಿವ ಕೆಎನ್ ರಾಜಣ್ಣ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅವಾಚ್ಯ ಪದಗಳಿಂದ ನಿಂದಿಸಿದ್ದರು ಎಂದು ತಿಳಿಸಿದರು.
ಇದೇ ದೇವೇಗೌಡರು. ಯಡಿಯೂರಪ್ಪ ಕೆಟ್ಟದಾಗಿ ಬೈದಿರುವುದು ನೆನಪಿದಿಯಾ? ಅಂಥವರ ಜೊತೆ ಇವರು ಹೇಗೆ ಬಂದರು ಮತ್ತೆ? ಅವಾಚ್ಯವಾಗಿ ಬೈದಿರುವುದರ ಬಗ್ಗೆ ನನ್ನ ಹತ್ತಿರ ದಾಖಲೆ ಇದೆ. ಬೈದ ಮೇಲೆ ಬಂದು ಯಾಕೆ ಮತ ಕೇಳ್ತಾರೆ? ಇವರಿಗೆ ಏನು ನೈತಿಕತೆ ಇದೆ ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಎಸೆದರು. ದೇವೇಗೌಡರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು ಸೋಮಣ್ಣಗೆ ವೋಟ್ ಕೊಡಿ ಅಂದಿದ್ದಾರಾ ಎಂದೂ ಪ್ರಶ್ನಿಸಿದರು.
ಒಂದೇ ರೂಂನಲ್ಲಿ ಗಂಡ-ಹೆಂಡತಿ, ಸ್ನೇಹಿತೆಯ ನಿಗೂಢ ಸಾವು: ವಾಮಾಚಾರಕ್ಕೆ ಬಲಿಯಾದ್ರಾ..?
ವಾಲ್ಮೀಕಿ ಸಮುದಾಯದ ರಾಜಣ್ಣ ಅವರ ಮಾತು ಕೇಳಬೇಡಿ ಎಂದು ದೇವೇಗೌಡರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ವಾಲ್ಮೀಕಿ ಸಮುದಾಯದ ನಾಯಕನಲ್ಲ. ನಾನು ಎಲ್ಲಾ ಜಾತಿಯಲ್ಲಿರುವ ಬಡವರ ನಾಯಕ. ನನಗೆ ಜಾತಿಯಿಲ್ಲ ಎಂದರು. ಇದೇವೇಳೆ ದೇವೇಗೌಡರು ಬರಿ ಒಕ್ಕಲಿಗ ನಾಯಕ ಅಂದ್ರೆ ಒಪ್ಪಿಕೊ ಬಿಡ್ತಾರಾ? ವಾಲ್ಮೀಕಿ ಸಮುದಾಯಕ್ಕೆ ಕರೆ ಕೊಡೊದಕ್ಕೆ ದೇವೇಗೌಡರಿಗೆ ನೈತಿಕ ಹಕ್ಕು ಏನಿದೆ? ನಾನು ವಾಲ್ಮೀಕಿ ಸಮುದಾಯದ ನಾಯಕನಲ್ಲ ಎಂದು ತಿಳಿಸಿದರು.