ಮಂಡ್ಯ : ಇದು ದೇವರ ಸಭೆ, ನಾನು ವೈಯಕ್ತಿಕ ಸ್ಥಾನಮಾನಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿಲ್ಲ. ನೀನೇ ನಿಲ್ಲಬೇಕು ಎಂದು ಹಿರಿಯರ ಒತ್ತಡ ಹಾಕಿದ್ದರು. ನೀವು ಬರಲಿಲ್ಲ ಅಂದ್ರೆ ಸಂಜಯ್ ಸರ್ಕಲ್ನಲ್ಲಿ ನೇಣು ಹಾಕಿಕೊಳ್ಳುತ್ತೇವೆ ಎಂದು ಕಾರ್ಯಕರ್ತರು ಹೇಳಿದ್ದರು. ಅದಕ್ಕಾಗಿ ನಾನು ಮಂಡ್ಯ ಜಿಲ್ಲೆಗೆ ಬಂದಿದ್ದೇನೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿದರು.
ಸಭೆಯಲ್ಲಿ ಮಾತನಾಡಿದ ಅವರು, 2019ರಲ್ಲಿ ಕಾಂಗ್ರೆಸ್ ನಾಯಕರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಮಲ್ಲಿಕಾರ್ಜುನ ಖರ್ಗೆ ಸೇರಿ ಯಾರನ್ನಾದರೂ ಸಿಎಂ ಮಾಡಿ ಅಂತ ಎಚ್ಡಿ ದೇವೇಗೌಡ ಅವರು ಹೇಳಿದ್ದರು. ದಿಲ್ಲಿ ನಾಯಕರು ನೀವೇ ಸಿಎಂ ಆಗಿ ಎಂದು ನನ್ನ ಮೇಲೆ ಒತ್ತಡ ಹಾಕಿದ್ರು, ಆದ್ರೆ ಅಧಿಕಾರ ಮಾಡೋಕೆ ಬಿಡಲಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಒಂದೇ ರೂಂನಲ್ಲಿ ಗಂಡ-ಹೆಂಡತಿ, ಸ್ನೇಹಿತೆಯ ನಿಗೂಢ ಸಾವು: ವಾಮಾಚಾರಕ್ಕೆ ಬಲಿಯಾದ್ರಾ..?
ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಸಿಎಂ ಸಿದ್ದರಾಮಯ್ಯ ಕೇಳುತ್ತಾರೆ. ನಾನು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರದ ಮುಂದೆ ಕೈಚಾಚಲಿಲ್ಲ. ಸಾಲ ಮನ್ನಾ ಮಾಡಿ ತೋರಿಸಿದ್ದೇನೆ. ನಮ್ಮ ನೀರು ನಮ್ಮ ಹಕ್ಕು ಅಂತ ಮೇಕೆದಾಟುವರೆಗೆ ಪಾದಯಾತ್ರೆ ಮಾಡಿದ್ರು. ಆದರೆ, ಈಗ ಮಂಡ್ಯದ ಕಬ್ಬು ಒಣಗುತ್ತಿದೆ. ಇದಕ್ಕೆ ಯಾರು ಕಾರಣ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ. ಭತ್ತ ನಾಟಿ ಮಾಡಬೇಡಿ ಅಂತ ಇದೇ ಪ್ರಥಮ ಬಾರಿಗೆ ಹೇಳಿದ್ದು ಕೃಷಿ ಸಚಿವ ಚಲುವರಾಯಸ್ವಾಮಿ ಎಂದು ಎಚ್ಡಿಕೆ ವಾಗ್ದಾಳಿ ನಡೆಸಿದರು.