ತಿರುವನಂತಪುರಂ: ಕೇಂದ್ರ ಸರ್ಕಾರದ ಸ್ವಾಮ್ಯದ ದೂರದರ್ಶನ ವಾಹಿನಿಯಲ್ಲಿ ವಿವಾದಿತ `ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಪ್ರಸಾರ ಮಾಡುವ ಪ್ರಸಾರ ಭಾರತಿ ನಿರ್ಧಾರಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಪ್ರಸಾರದಿಂದ ಈ ಲೋಕಸಭಾ ಚುನಾವಣೆಯಲ್ಲಿ ಕೋಮು ಉದ್ವಿಗ್ನತೆ ಉಲ್ಪಣಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ರಾಷ್ಟ್ರೀಯ ವಾಹಿನಿಯು ಬಿಜೆಪಿ ಮತ್ತು ಆರ್ ಎಸ್ಎಸ್ ನ ಪ್ರಚಾರ ಯಂತ್ರ ಆಗಬಾರದು ಎಂದು ಮನವಿ ಮಾಡಿದ್ದಾರೆ. ದೂರದರ್ಶನವು ಕೇರಳ ಸ್ಟೋರಿ ಚಲನಚಿತ್ರವನ್ನು ಏಪ್ರಿಲ್ 5ರಂದು ಪ್ರಸಾರ ಮಾಡುವುದಾಗಿ ತಿಳಿಸಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು,
ಒಂದೇ ರೂಂನಲ್ಲಿ ಗಂಡ-ಹೆಂಡತಿ, ಸ್ನೇಹಿತೆಯ ನಿಗೂಢ ಸಾವು: ವಾಮಾಚಾರಕ್ಕೆ ಬಲಿಯಾದ್ರಾ..?
“ಡಿಡಿ ರಾಷ್ಟ್ರೀಯ ವಾಹಿನಿಯಲ್ಲಿ ಸಮಾಜದ ಧ್ರುವೀಕರಣವನ್ನು ಪ್ರಚೋದಿಸುವ ಕೇರಳ ಸ್ಟೋರಿಯನ್ನು ಪ್ರಸಾರ ಮಾಡಲು ಹೊರಟಿರುವುದು ತೀವ್ರ ಖಂಡನೀಯ ವಿಚಾರವಾಗಿದೆ. ರಾಷ್ಟ್ರೀಯ ವಾಹಿನಿ ಬಿಜೆಪಿ ಮತ್ತು ಆರೆಸ್ಸೆಸ್ಸಿನ ಪ್ರಚಾರದ ಯಂತ್ರದಂತೆ ಕಾರ್ಯನಿರ್ವಹಿಸುವುದು ಸರಿಯಲ್ಲ. ಹೀಗಾಗಿ ಈ ಚಲನಚಿತ್ರವನ್ನು ಪ್ರಸಾರ ಮಾಡುವ ತನ್ನ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
ದ್ವೇಷವನ್ನು ಬಿತ್ತುವ ಇಂತಹ ದುರುದ್ದೇಶರಪೂರಿತ ಸಂಗತಿಗಳನ್ನು ವಿರೋಧಿಸುವಲ್ಲಿ ಕೇರಳವು ದೃಢವಾಗಿ ಸೆಟೆದು ನಿಲ್ಲಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತ್ರವಲ್ಲದೆ ಆಡಳಿತಾರೂಢ ಸಿಪಿಎಂ ಪಕ್ಷ ಸಹ ದೂರದರ್ಶನದ ಈ ನಿಲುವನ್ನು ಬಲವಾಗಿ ವಿರೋಧಿಸಿದೆ. ಕೇರಳದ ಜಾತ್ಯತೀತ ಸಮಾದವನ್ನು ಕದಡಬಲ್ಲ ಇಂತಹ ಬಿಜೆಪಿಯ ಇಂತಹ ಪ್ರಯತ್ನವನ್ನು ಪಕ್ಷ ಬೆಂಬಲಿಸುವುದಿಲ್ಲ ಎದು ತಿಳಿಸಿದೆ.
ಇದು ಕೇರಳಕ್ಕೆ ಹಾಕಿರುವ ಸವಾಲಾಗಿದೆ. ಈ ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಕೇರಳವು ಬಲವಾಗಿ ವಿರೋಧಿಸಿತ್ತು. ಮಾತ್ರವಲ್ಲದೆ ಸ್ವಯಂ ಸೆನ್ಸಾರ್ ಮಂಡಳಿಯೇ ಈ ಚಿತ್ರದಲ್ಲಿನ 10 ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಹೀಗಾಗಿ ಜ್ಯಾತತೀತ ಸಮಾಜವನ್ನು ಕಲಕುವ ಬಿಜೆಪಿಯ ಈ ಪ್ರಯತ್ನಕ್ಕೆ ಸಾರ್ವಜನಿಕ ವಲಯದ ವಾಹಿನಿಯಾದ ದೂರದರ್ಶನ ಸಾಥ್ ನೀಡಬಾರದು ಎಂದು ಸಿಪಿಎಂ ಆಗ್ರಹಿಸಿದೆ.