ಹಾವೇರಿ: ಪಾಕಿಸ್ತಾನ ದಿಂದ ಬೆಂಬಲ ಪಡೆದ PFI & SDPI ಜೊತೆ ಕಾಂಗ್ರೇಸ್ ಸೇರಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ಹಾವೇರಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಸಮಾಜಗಳ ಮಧ್ಯ ಅಂತರ ಬಿತ್ತುವರು ಕಾಂಗ್ರೆಸ್ ನವರು, ಜಾತಿ ಜನಾಂಗದ ಮಧ್ಯ ಕಾಂಗ್ರೇಸ್ ನವರು ಸಂಘರ್ಷ ಉಂಟು ಮಾಡ್ತಿದ್ದಾರೆ.
ಪಾಕ್ ಜಿಂದಾಬಾದ್ & ಹಿಂದೂಸ್ಥಾನ್ ಮೂರ್ದಾಬಾದ್ ಅಂತಾ ಕರೆಯೋರ ಜೊತೆ ಕಾಂಗ್ರೆಸ್ ಸೇರಿಕೊಂಡಿದೆ. ಅಂತವರನ್ನ ತುಕ್ಡೆ ತುಕ್ಡೆ ಗ್ಯಾಂಗ್ ಅಂತಾ ಕರಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು. ದೇಶವನ್ನ ಕಟ್ಟುವವರಿಗೆ ಅಧಿಕಾರ ಜನರು ನೀಡ್ಬೇಕು. ಕಾಂಗ್ರೆಸ್ 10 ತಿಂಗಳ ಆಡಳಿತ ಕಂಡು ಜನ ತಿರ್ಮಾನ ಮಾಡಿದ್ದಾರೆ.
ಸರ್ಕಾರದ ಯಾವುದೆ ಇಲಾಖೆಯಲ್ಲಿ ಒಂದು ಸಣ್ಣ ಅಭಿವೃದ್ಧಿಯಾಗಿಲ್ಲ, ಯಾವ್ದೆ ಹಣಕಾಸಿನ ವ್ಯವಸ್ಥೆ ಇಲ್ದೆ ಗ್ಯಾರಂಟಿ ಯೋಜನೆ ನೀಡಿದರು. ನಮ್ಮ ಸರ್ಕಾರ ಇದ್ದಾಗ ರೈತಪರ ಯೋಜನೆಯನ್ನ ನಾವು ನೀಡಿದ್ವಿ, 10 ಕೆಜಿ ಅಕ್ಕಿ ಅಂದ್ರು ಎಲ್ಲಿ ನೀಡಿದ್ರು…? ಕೇಂದ್ರ ಸರ್ಕಾರದ ಅಕ್ಕಿ ಜನರಿಗೆ ನೀಡಿ ನಾವೇ ನೀಡಿದ್ವಿ ಅಂತಾ ಪ್ರಚಾರ ಮಾಡ್ತಾರೆ ಎಂದು ಆರೋಪಿಸಿದರು.