ಬಳ್ಳಾರಿ: ತೋಳಗಳ ದಾಳಿಗೆ 20 ಕುರಿಗಳು ಬಲಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ತೆಲುಗುರ ದೊಡ್ಡ ರಂಗಪ್ಪ ಸೇರಿದ ಸುಮಾರು 20 ಕುರಿಗಳು ತೋಳಗಳಿಗೆ ಬಲಿಯಾಗಿದ್ದು, ಕುರಿ ಹಟ್ಟಿಗೆ ನುಗ್ಗಿ ಕುರಿ ಮರಿಗಳನ್ನು ತೋಳಗಳು ತಿಂದುಹಾಕಿವೆ.
ಇನ್ನುಳಿದ ಕುರಿಗಳಿಗೆ ಸಣ್ಣಪುಟ್ಟ ತೀವ್ರ ಗಾಯಗಳಾಗಿದ್ದು, ನರಿಗಳ ದಾಳಿಯಿಂದ ಸುಮಾರು ಒಂದು ಲಕ್ಷ ಮೌಲ್ಯವು ನಷ್ಟ ಉಂಟಾಗಿದೆ. ಸ್ಥಳಕ್ಕೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಗಂಗಾಧರ ಮತ್ತು ಗ್ರಾಮದ ಪಶು ವೈದ್ಯ ಶಿವರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಸತ್ತ ಕುರಿಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದರು.