ಬಳ್ಳಾರಿ: ಜನಾರ್ಧನ್ ರೆಡ್ಡಿ ಬಿಜೆಪಿಗೆ ಸೇರಿರುವ ಹಿನ್ನೆಲೆ ಬಹುತೇಕ ಕೆ ಆರ್ ಪಿ ಪಕ್ಷದ ನಾಯಕರು ಬಿಜೆಪಿಗೆ ಮರಳುವ ಸಿದ್ಧತೆ ಮಾಡಿಕೊಂಡಿದ್ದಾರೆ. KRPP ನಾಯಕಿ ಅರುಣಾ ಲಕ್ಷ್ಮೀ ಜೊತೆ ಇಂದು ಬಳ್ಳಾರಿಯಲ್ಲಿ ಶ್ರೀರಾಮುಲು ಸಭೆ ನಡೆಸಲಿದ್ದು, ಬಿಜೆಪಿ ತೊರೆದು KRPP ಸೇರಿದ್ದ ಬಳ್ಳಾರಿ ನಾಯಕರುಗಳು ಮರಳಿ ಬಿಜೆಪಿಗೆ ಸೇರಲಿದ್ದಾರೆ.
ಜನಾರ್ಧನ್ ರೆಡ್ಡಿ ಬಿಜೆಪಿ ಸೇರಿದ್ದರು ಸಹ ಬಳ್ಳಾರಿ KRPP ನಾಯಕರು ಎಲ್ಲೂ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿರಲಿಲ್ಲ, ಇಂದಿನಿ ಸಭೆಯಲ್ಲಿ ಎಲ್ಲಾ ನಾಯಕರುಗಳನ್ನ ಪ್ರಚಾರಕ್ಕೆ ಕರೆತರುವ ಪ್ರಯತ್ನ ನಡೆಸಿದ್ದು, ಸಂಜೆ ನಾಲ್ಕು ಗಂಟೆಗೆ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಸೇರಿದಂತೆ ಕೆಆರ್ಪಿಪಿ ನಾಯಕರುಗಳ ಜೊತೆ ಸಭೆ ನಡೆಸಲಿದ್ದಾರೆ. ಬಳ್ಳಾರಿ ಬಿಜೆಪಿ ಕಚೇರಿಯಲ್ಲಿ ಶ್ರೀರಾಮುಲು ಸಭೆ ಕರೆದಿದ್ದಾರೆ.