ಹಾಸನ: ಬಿಜೆಪಿಯ ಒಬ್ಬರೇ ಒಬ್ಬರು ಕಾರ್ಯಕರ್ತರಿಗೆ ಕಾಂಗ್ರೆಸ್ – ಜೆಡಿಎಸ್ನಿಂದ ಸಮಸ್ಯೆ ಆದರೆ, ಕಿರುಕುಳ ನೀಡಿದರೆ ಧೃತಿಗೆಡಬೇಡಿ ನಿಮ್ಮೊಂದಿಗೆ ನಾನಿರುತ್ತೇನೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಜೆ.ಗೌಡ ಅಭಯ ನೀಡಿದರು. ನಗರದಲ್ಲಿ ನಡೆದ ಜಿಲ್ಲಾ ಬಿಜೆಪಿ ಪದಾಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೆಲಸ ಆಗಬೇಕಾದರೆ ಆತ್ಮೀಯರು ಎನ್ನುವುದು, ಬಳಿಕ ಒಬ್ಬರೇ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಶೋಷಣೆ ಮಾಡಲು ಬಂದರೆ ನಿಮ್ಮ ಪರವಾಗಿ ಮೊದಲು ಬಂದು ನಿಲ್ಲುವನು ಪ್ರೀತಂ ಜೆ.ಗೌಡ ಎಂದು ಹೇಳಿದರು.
ಒಂದೇ ಸೀರೆಯನ್ನು ಪದೇ ಪದೇ ಧರಿಸುತ್ತಿದ್ದೀರಾ!?, ಹುಷಾರ್ ಕ್ಯಾನ್ಸರ್ ಬರಬಹುದು!
2013 ರಲ್ಲಿ ಅಭ್ಯರ್ಥಿಯಾಗಲು ಯಾರು ಸಿದ್ಧರಿರಲಿಲ್ಲ. ಜಿಲ್ಲಾ ರಾಜಕಾರಣದ ಸ್ಥಿತಿ ಆ ರೀತಿ ಇತ್ತು 2023 ರಲ್ಲಿ ಸಕಲೇಶಪುರ ಕ್ಷೇತ್ರದಲ್ಲಿ ಸಿಮೆಂಟ್ಮಂಜು, ಬೇಲೂರಿನಲ್ಲಿ ಎಚ್.ಕೆ.ಸುರೇಶ್ ಶಾಸಕರಾಗಲು ನಮ್ಮಗಳ ನಡವಳಿಕೆ , ಕಾರ್ಯಕರ್ತರ ಹೋರಾಟ ಕಾರಣವಾಗಿದೆ ಎರಡು ಕ್ಷೇತ್ರ ಮುಂದೆ ನಾಲ್ಕು ಆಗಬೇಕು ಎಂದರೆ ಸ್ವಾಭಿಮಾನದಿಂದ ಹೋರಾಟ ಮುಂದುವರೆಸಿಕೊಂಡು ಹೋಗಬೇಕು ಎಂದರು. 5 ವರ್ಷ ಶಾಸಕನಾಗಿದ್ದ ವೇಳೆ ಹೊಂದಾಣಿಕೆ ರಾಜಕಾರಣ ಮಾಡದೆ , ಹೆದರಿಸಿದವರಿಗೆ ಹೆದರದೆ ಪ್ರಾಮಾಣಿಕವಾಗಿ ಎಲ್ಲರೊಂದಿಗೆ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.