ಮೈಸೂರು: ಪ್ರತಾಪ್ ಸಿಂಹಗೆ ದೇವೇಗೌಡರು ಟಿಕೆಟ್ ತಪ್ಪಿಸಿದ್ದಾರೆ ಅಂತ ಹಬ್ಬಿರುವ ಸುದ್ದಿ ಆಧಾರರಹಿತ ಎಂದು ಯದುವೀರ್ ಕೃಷ್ಣದತ್ ಒಡೆಯರ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊದಿಗೆ ಮಾತಾಡಿದ ಯದುವೀರ್, ಚುನಾವಣಾ ಪ್ರಚಾರದಲ್ಲಿ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗದೆ ಅದರ್ಶಮಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದರೆ ಚುನಾವಣೆಗೊಂದು ಘನತೆ ಬರುತ್ತದೆ ಎಂದು ಹೇಳಿದರು.
Child Falls Into Borewell: ಕೊಳವೆ ಬಾವಿಗೆ ಬಿದ್ದ ಕಂದನ ನರಳಾಟ..! ಕ್ಯಾಮೆರಾದಲ್ಲಿ ಸೆರೆಯಾಯ್ತು ಮಗುವಿನ ಕಾಲು
ಯದುವೀರ್ ಅವರನ್ನು ತಾನೇ ನೋಡಿಲ್ಲ ಇನ್ನು ಜನ ಅವರನ್ನು ಗುರುತಿಸುವುದು ಎಲ್ಲಿಂದ ಬಂತು ಅಂತ ಸಚಿವ ಕೆ ವೆಂಕಟೇಶ್ ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿದ ಯುದವೀರ್, ಕಳೆದ 9-10 ವರ್ಷಗಳಿಂದ ಜನರ ನಡುವೆ ತಾನು ಓಡಾಡುತ್ತಿದ್ದು ಜನ ತಮ್ಮನ್ನು ಗುರುತಿಸುತ್ತಾರೆಯೋ ಇಲ್ಲವೋ ಅನ್ನೋದು ಅವರ ತೀರ್ಮಾನಕ್ಕೆ ಬಿಟ್ಟಿದ್ದು ಎಂದರು. ಪ್ರತಾಪ್ ಸಿಂಹಗೆ ದೇವೇಗೌಡರು ಟಿಕೆಟ್ ತಪ್ಪಿಸಿದ್ದಾರೆ ಅಂತ ಹಬ್ಬಿರುವ ಸುದ್ದಿ ಆಧಾರರಹಿತ ಎಂದು ಅವರು ಹೇಳಿದರು.