ತುಮಕೂರು: ತುಮಕೂರಿನಲ್ಲಿ ಲೋಕಕದನ ಗೆಲ್ಲಲು ಮುದ್ದಹನುಮೇಗೌಡ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಟಿ.ಬಿ ಜಯಚಂದ್ರರನ್ನ ಮನವೊಲಿಸುವಲ್ಲಿ ಮುದ್ದಹನುಮೇಗೌಡ ಸಕ್ಸಸ್ ಆಗಿದ್ದಾರೆ. ಜಯಚಂದ್ರ ಜೊತೆ ಸುಧೀರ್ಘ ಚರ್ಚೆ ನಡೆಸಿ ಅಸಮಾಧಾನವನ್ನ ಶಮನಗೊಳಿಸಿದ್ದಾರೆ. ಶಿರಾದಲ್ಲಿರುವ ಟಿಬಿ ಜಯಚಂದ್ರ ಮನೆಯಲ್ಲಿ ಶಾಸಕ ಎಸ್.ಆರ್ ಶ್ರೀನಿವಾಸ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ,ಹಾಗೂ ಕುಂಚಿಟಿಗ ಸಮುದಾಯದ ನಾಯಕರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಯಿತು.
ಮುದ್ದಹನುಮೇಗೌಡ ಗೆಲುವಿಗೆ ಸಹಕಾರ ನೀಡೋದಾಗಿ ಟಿ.ಬಿ ಜಯಚಂದ್ರ ಭರವಸೆ ನೀಡಿದರು. ಆರಂಭದಲ್ಲಿ ಮುದ್ದಹನುಮೇಗೌಡಗೆ ಲೋಕಸಭಾ ಟಿಕೆಟ್ ನೀಡದಂತೆ ವಿರೋಧ ವ್ಯಕ್ತಪಡಿಸಿದ್ದ ಟಿ.ಬಿ ಜಯಚಂದ್ರ ತಮ್ಮ ಮಗ ಸಂಜಯ್ ಜಯಚಂದ್ರಗೆ ಟಿಕೆಟ್ ಕೊಡುವಂತೆ ಡಿಮ್ಯಾಂಡ್ ಇಟ್ಟಿದ್ದರು.
ಮಗನಿಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಅಸಮಾಧಾನಗೊಂಡಿದ್ದ ಟಿಬಿ ಜಯಚಂದ್ರ ಮುದ್ದಹನುಮೇಗೌಡ ಪರ ಪ್ರಚಾರ ಮಾಡಲು ಹಿಂದೇಟು ಹಾಕಿದ್ರು.. ಇದಾದ ಬೆನ್ನಲ್ಲೇ ಎಚ್ಚೆತ್ತ ಮುದ್ದಹನುಮೇಗೌಡ ಟಿಬಿ ಜಯಚಂದ್ರರನ್ನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಿ ಸಂಧಾನದ ಬಳಿಕ ಮುದ್ದಹನುಮೇ ಗೌಡರನ್ನ ತಬ್ಬಿಕೊಂಡು ಮುದ್ದಹನುಮೇಗೌಡ ಗೆಲುವಿಗೆ ಶ್ರಮಿಸೋದಾಗಿ ಟಿ.ಬಿ ಜಯಚಂದ್ರ ಭರವಸೆ ನೀಡಿದರು.