ಬೆಂಗಳೂರು: ಕೇಂದ್ರ ಗೃಹ ಸಚಿವ ಚುನಾವಣಾ ಚಾಣಕ್ಯ ಅಮಿತ್ ಶಾ ರಾಜ್ಯ ಮೈತ್ರಿ ನಾಯಕರಿಗೆ ಎಲೆಕ್ಷನ್ ಬೂಸ್ಟ್ ನೀಡಿದ್ದಾರೆ. ಮೈತ್ರಿ ನಾಯಕರ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಗೆಲುವಿನ ಟಾನಿಕ್ ಕೊಟ್ರೆ. ಬೂತ್ ಪ್ರಮುಖರ ಸಮಾವೇಶ ನಡೆಸಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದ್ರು, ಈ ಮಧ್ಯೆ ಬಿಜೆಪಿಯಲ್ಲಿ ಹಾರಾಡ್ತಿದ್ದ ಬಂಡಾಯದ ಬಾವುಟಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಿದ್ದು ಅಸಮಾಧಾನಿತ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಡಿಕೆ ಬ್ರದರ್ಸ್ ಕೋಟೆಯಲ್ಲಿ ಮೆಗಾ ರೋಡ್ ಶೋ ನಡೆಸಿದ ಶಾ ಬಂಡೆಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಬಿಜೆಪಿ ಜೆಡಿಎಸ್ ಮೈತ್ರಿ ಬಳಿಕ ಮೊದಲ ಭಾರಿಗೆ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಮೈತ್ರಿ ನಾಯಕರ ಸಭೆ ಮಾಡುವ ಮೂಲಕ ರಾಜಕೀಯ ರಣತಂತ್ರ ಮತ್ತು ಅಸಮಾಧಾನ ಶಮನ ಮಾಡುವ ಪ್ರಯತ್ನ ಮಾಡಿದ್ರು. ಮೊದಲಿಗೆ ಬೆಂಗಳೂರು ಟಿಕೆಟ್ ಸಿಗದ ಕಾರಣ ಬಿಎಸ್ವೈ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶುದ್ದೀಕರಣದ ಸಮರ ಸಾರಿದ್ದ ಮಾಜಿ ಸಿಎಂ ಸದಾನಂದಗೌಡರ ಜೊತೆ ಅಮಿತ್ ಶಾ ಪ್ರತ್ಯೇಕವಾಗಿ ಸಭೆ ನಡೆಸಿದ್ರು. ಡಿವಿಎಸ್ ಜೊತೆ ಚರ್ಚೆ ನಡೆಸಿದ ಶಾ ಈ ಬಾರಿ ಶೋಭಾ ಕರಂದ್ಲಾಜೆ ಸಪೋರ್ಟ್ ಮಾಡಿ,ಮುಂದಿನ ದಿನಗಳಲ್ಲಿ ಪಕ್ಷ ನಿಮಗೆ ಸೂಕ್ರ ಸ್ಥಾನಮಾನ ನೀಡುತ್ತೆ. ಪಕ್ಷ ವಿರುದ್ಧ ಮಾತನಾಡಬೇಡಿ. ನೀವು ಮಾಡಿರುವ ಆರೋಪಗಳು ಹೈಕಮಾಂಡ್ ಗಮನಕ್ಕೆ ಬಂದಿದೆ ಆ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುತ್ತೇವೆ ಎನ್ನೋ ಮೂಲಕ ಸದಾನಂದಗೌಡರನ್ನ ಕೂಲ್ ಮಾಡುವ ಮಾಡುವ ಪ್ರಯತ್ನ ಮಾಡಿದ್ರು
ಸದಾನಂದಗೌಡರ ಜೊತೆಗಿನ ಸಭೆ ನಂತ್ರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಜೊತೆ ಒನ್ ಟು ಒನ್ ಚರ್ಚೆ ನಡೆಸಿದ ಅಮಿತ್ ಶಾ ಅಸಮಾಧಾನಿತ ಕ್ಷೇತ್ರಗಳು, ಗೆಲುವಿನ ರಣತಂತ್ರ, ಪ್ರಚಾರ ಹಾಗೂ ಜಾತಿವಾರು ಮತಗಳ ಕೃಢಿಕರಣ ಬಗ್ಗೆ ಮಾತುಕತೆ ನಡೆಸಿದ್ರು. ಈ ಸಮಯದಲ್ಲೇ ಈಶ್ವರಪ್ಪ ಬಂಡಾಯದ ಬಗ್ಗೆ ಶಾ ಗಮನಕ್ಕೆ ತಂದ್ರು ಬಿಎಸ್ವೈ. ಆಗ ಈಶ್ವರಪ್ಪಗೆ ಕರೆ ಮಾಡಿದ ಶಾ ಬಂಡಾಯ ಬಿಟ್ಟು ದೆಹಲಿಗೆ ಬನ್ನಿ ಮಾತಡೋಣ ಎಂದು ತಿಳಿದ್ರು. ಇದಾದ ನಂತ್ರ 15 ಜನ ಬಿಜೆಪಿ ನಾಯಕರ ಜೊತೆ ಪ್ರತ್ಯೇಕ ಸಭೆ ನಡೆಸಿದ್ರು ಅಮಿತ್ ಶಾ. ಈ ಸಭೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ಗೆ ಬೆಂಬಲ ಕೊಡುವ ಬಗ್ಗೆ ಚರ್ಚೆ ಹಾಗೂ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಸೇರಿದಂತೆ ಜೆಡಿಎಸ್ ಪ್ರಬಲ ಇರುವ ಕ್ಷೇತ್ರದಲ್ಲಿ ಬಿಜೆಪಿ ಮತ ಬರುವಂತೆ ತಂತ್ರಗಾರಿಕೆ ನಡೆಸಿದ್ರು…
ಸಭೆಗೆ ಮಾಜಿ ಸಿಎಂ ಕುಮಾಸ್ವಾಮಿ ಬಂದ ನಂತರ ಕಮಲ-ದಳ ನಾಯಕರ ಜೊತೆ ಬಿಜೆಪಿ ಚಾಣಕ್ಯ ಸಭೆ ನಡೆಸಿದ್ರು. ಇದರಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ವಿಜಯೇಂದ್ರ, ಬಂಡೆಪ್ಪ ಕಾಶಂಪೂರ್ ಸೇರಿ ಎರಡು ಪಕ್ಷದ ಪ್ರಮುಖ ನಾಯಕರು ಭಾಗಿಯಾಗಿದ್ರು. ಸಭೆಯಲ್ಲಿ ರಾಜ್ಯದಲ್ಲಿ ಒಕ್ಕಲಿಗ-ಲಿಂಗಾಯತರ ಮತಗಳನ್ನು ಒಗ್ಗೂಡಿಸಿ ಎಂಬ ಸಂದೇಶವನ್ನ ನೀಡಿದ್ರು ಶಾ. ಅಕ್ಕ-ಪಕ್ಕ ಬಿಎಸ್ವೈ-ಹೆಚ್ಡಿಕೆಯನ್ನ ಕೂರಿಸಿಕೊಂಡು ಮೀಟಿಂಗ್ ಮಾಡುವ ಮೂಲಕ ಎರಡು ಸಮುದಾಯದವರ ಪರ ಬಿಜೆಪಿ ಇದೆ ಎಂಬ ದೊಡ್ಡ ಸಂದೇಶವನ್ನ ಸಾರಿದ್ರು ಚಾಣಕ್ಯ. ಬಿಎಸ್ವೈ ಹಾಗೂ ಹೆಚ್ಡಿಕೆಗಿರುವ ಅನುಭವ ಬಳಸಿಕೊಂಡು ಎಲ್ಲರೂ ಗೆಲುವಿನ ಪ್ಲಾನ್ ಮಾಡಿ ಎಂದು ಸಂದೇಶ ನೀಡಿದ್ರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅದಂತೆ ತಪ್ಪುಗಳು ಮರುಕಳಿಸದಂತೆ ಎಚ್ಚೆರಿಕೆ ವಹಿಸಿ ಎಂದ್ರು…..
ಮೈತ್ರಿನಾಯಕರ ಜೊತೆಗಿನ ನಂತರ ಪ್ಯಾಲೇಸ್ ಗ್ರೌಂಡ್ ಗೆ ತೆರಳಿದ ಅಮಿತ್ ಶಾ ಬೂತ್ ಮುಖಂಡರ ಸಮಾವೇಶದಲ್ಲಿ ಭಾಗಿಯಾದ್ರು. ಈ ವೇಳೆ ಶಾ ಕಾರ್ಯಕರ್ತರಿಗೆ ಗೆಲುವಿನ ಟಾಸ್ಕ್ ಕೊಟ್ರು ಲೋಕಸಭೆ ತಯಾರಿಗಾಗಿ ಇಲ್ಲಿ ಸೇರಿದ್ದೇವೆ. ಮೋದಿ ನೇತೃತ್ವದಲ್ಲಿ ಚುನಾವಣಾ ಮೈದಾನದಲ್ಲಿ ಇದ್ದೇವೆ, ಎಲ್ಲೇ ಹೋದರೂ ಮೋದಿ ಮೋದಿ ಹೆಸರು ಕೇಳಿ ಬರ್ತಿದೆ. ಈ ಸಲ 60% ಮತ ಪಡೆದು ಎಲ್ಲಾ 28 ಕ್ಷೇತ್ರ ಗೆಲ್ಲಿಸಬೇಕು ಅಂತ ಟಾಸ್ಕ್ ಕೊಟ್ರು…..
ಸಮಾವೇಶದ ನಂತ್ರ ಮಧ್ಯಾನ್ಹ 3 ಗಂಟೆಗೆ ಅಸಮಾಧಾನಿತ 6 ಜಿಲ್ಲೆಗಳ ನಾಯಕರ ಜೊತೆ ಸಂಧಾನಸಭೆ ನಡೆಸಿದ್ರು ಅಮಿತ್ ಶಾ. ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬೀದರ್ & ಬೆಳಗಾವಿ ಅಭ್ಯರ್ಥಿಗಳು & ಅಸಮಾಧಾನಿತ ನಾಯಕರ ಜತೆ ಚರ್ಚೆ ನಡೆಸಿದ್ರು. ಅಸಮಾಧಾನ ಬದಿಗೊತ್ತಿ ಪಕ್ಕಕ್ಕಾಗಿ ದುಡಿಯುವಂತೆ ಸೂಚನೆ ನೀಡಿದ್ರು. ನಮ್ಮ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ಗೆ ವರದಾನ ಆಗೋದು ಬೇಡ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾದಂತೆ ಆಗಬಾರದು , ಮುಂದೆ ಎಲ್ಲರಿಗೂ ಪಕ್ಷದಲ್ಲಿ ಒಳ್ಳೆಯ ಭವಿಷ್ಯ ಇದೆ.. 28 ಕ್ಷೇತ್ರಗಲ್ಲೂ ಗೆಲ್ಲುವ ರೀತಿ ಕೆಲಸ ಮಾಡಿ ಎಂದು ಸೂಚಿಸಿದ್ರು.
ಡಿಕೆ ಬ್ರದರ್ಸ್ ಅನ್ನೇ ಟಾರ್ಗೆಟ್ ಮಾಡಿರುವ ಕಮಲಪಡೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚನ್ನಪಟ್ಟಣದಲ್ಲಿ 1.6 ಕಿಲೋಮೀಟರ್ ಮೆಗಾ ರೋಡ್ ಶೋ ನಡೆಸಿದ್ರು ಅಮಿತ್ ಶಾ. ಈ ಮೂಲಕ ಡಿಕೆ ಸಹೋದರರಿಗೆ ಸೋಲಿನ ರುಚಿ ತೋರಿಸುವ ಎಚ್ಚರಿಕೆ ಕೊಟ್ರು….
ಒಟ್ನಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ ಆಗಿರೋದು ಕಮಲದಳ ನಾಯಕರಲ್ಲಿ ಸಂಚಲನ ಮೂಡಿಸಿದೆ. ಮೈತ್ರಿಯ ಬಗ್ಗೆ ಗೊಂದಲಕ್ಕೆ ಫುಲ್ ಸ್ಟಾಪ್ ಹಾಕಿ ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಚಾರಕ್ಕೆ ಬಿಜೆಪಿ ಜೆಡಿಎಸ್ ನಾಯಕರಿಗೆ ಅಮಿತ್ ಶಾ ಸೂಚನೆ ಕೊಟ್ಟಿರೋದ್ರ ಜೊತೆಗೆ ಹೊಂದಾಣಿಕೆಯಲ್ಲಿ ಯಾವುದೇ ಬಿನ್ನಾಬಿಪ್ರಾಯ ಎದುರಾಗದಂತೆ ನೋಡಿಕೊಳ್ಳಬೇಕಂತ ಕಟ್ಟಾಜ್ಞೆ ವಿಧಿಸಿದ್ದಾರೆ. ಅಸಮಾಧಾನಕ್ಕೂ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿರುವ ಅಮಿತ್ ಶಾ ಸ್ಟ್ರಾಟಜಿ ರಾಜ್ಯದಲ್ಲಿ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಎಂಬುದನ್ನ ಕಾದುನೋಡಬೇಕಿದೆ….