ಬೆಂಗಳೂರು: ಸ್ಯಾಂಡಲ್ವುಡ್ ಲೀಡರ್, ದೊಡ್ಮನೆಯ ಹಿರಿಯ ಕುಡಿ ಡಾ.ಶಿವರಾಜ್ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದೆ.
ಮಹಿಳೆ ಜೊತೆ ಅನುಚಿತ ವರ್ತನೆ: ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ವಿರುದ್ಧ ದೂರು !
ಇತ್ತೀಚಿಗೆ ಸಿನಿಮಾ ಶೂಟಿಂಗ್ ಜೊತೆ ಜೊತೆಗೆ ಪತ್ನಿ ಗೀತಾ ಶಿವರಾಜ್ಕುಮಾರ್ ಪರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲೂ ಭಾಗಿಯಾಗುತ್ತಿದ್ದರು ಶಿವಣ್ಣ. ನಿರಂತರ ಓಡಾಟದ ಹಿನ್ನೆಲೆ ಜನರಲ್ ಚೆಕಪ್ಗೆಂದು ವೈಟ್ಫೀಲ್ಡ್ನ ಖಾಸಗಿ ಆಸ್ಪತ್ರೆಗೆ ತೆರಳಿ ಮತ್ತೆ ನಾಗವಾರದ ಶ್ರೀಮುತ್ತು ನಿವಾಸಕ್ಕೆ ತೆರಳಿದ್ದಾರೆ ಅನ್ನೋದು ಆಪ್ತರ ಮಾತು.
ಆದ್ರೆ ಅಧಿಕೃತ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಶಿವಣ್ಣನ ಕೈ ಬೆರಳೊಂದಕ್ಕೆ ಸಣ್ಣ ಶಸ್ತ್ರ ಚಿಕಿತ್ಸೆ ಆಗಿದೆ. ಹಲವು ದಿನಗಳಿಂದ ಬೆರಳೊಂದರಿಂದ ನೋವು ಅನುಭವಿಸುತ್ತಿದ್ದ ಶಿವಣ್ಣ, ಇಂದು ವೈದ್ಯರ ಸಲಹೆಯಂತೆ ವೈದೇಹಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿದ್ದಾರೆ
ತೀರಾ ಮೈನರ್ ಸರ್ಜರಿ ಆಗಿರೋದ್ರಿಂದ ಒಂದೇ ಗಂಟೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ, ಮನೆಗೆ ಕಳುಹಿಸಿಕೊಟ್ಟಿದ್ದಾರೆ. ನಿನ್ನೆವರೆಗೂ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ಶಿವಣ್ಣ, ಏಪ್ರಿಲ್ 6ರಿಂದ ಮತ್ತೆ ಭೈರತಿ ರಣಗಲ್ ಸೆಟ್ಗೆ ಎಂಟ್ರಿ ಕೊಡಲಿದ್ದಾರೆ.