ಬಳ್ಳಾರಿ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರು ಕಳಂಕವಿಲ್ಲದ ನಾಲ್ಕು ಬಾರಿ ಶಾಸಕರಾದ ಸೌಮ್ಯ ಅಭ್ಯರ್ಥಿ ಎಂದು ಸಚಿವ ನಾಗೇಂದ್ರ ಹೇಳಿದರು. ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿ ಗೋಷ್ಠಿ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರು ಕಳಂಕವಿಲ್ಲದ ನಾಲ್ಕು ಬಾರಿ ಶಾಸಕರಾದ ಸೌಮ್ಯ ಅಭ್ಯರ್ಥಿ. ಪ್ರತಿಸ್ಪರ್ಧಿ ಯಾರೆಂಬುದು ನೋಡುವುದಿಲ್ಲ,
ಅಭ್ಯರ್ಥಿ ಗೆಲುವಿಗೆ ನಾನು, ಸಚಿವ ಜಮೀರ್, ಸಂತೋಷ ಲಾಡ್, ನಾಸೀರ್ ಹುಸೇನ್ ಎಲ್ಲರನ್ನು ಒಳಗೊಂಡ ಶ್ರಮಿಸುತ್ತೇವೆ. ಪಕ್ಷದಲ್ಲಿ ಏನೆ ಭಿನ್ನಾಭಿಪ್ರಾಯ ಇದ್ದರೂ ಚುನಾವಣೆಯಲ್ಲಿ ಒಂದಾಗಿ ಗೆಲ್ಲಿಸುತ್ತೇವೆ. ರಾಜ್ಯದ ಬೊಕ್ಕಸಕ್ಕೆ ಭಾರವಾದರೂ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಈ ಐದು ಗ್ಯಾರಂಟಿಯೇ ನಮಗೆ ಚುನಾವಣೆಯಲ್ಲಿ ಶ್ರೀರಕ್ಷೆಯಾಗಿವೆ ಎಂದು ತಿಳಿಸಿದರು. ಅಭ್ಯರ್ಥಿ ಘೋಷಣೆ ಪೂರ್ವದಲ್ಲಿ ಸಚಿವ ಸಂತೋಷ್ ಲಾಡ್ ಅವರು ಸಂಡೂರಲ್ಲಿ ಸಭೆ ಮಾಡಿದ್ದಾರೆ.
ನನ್ನ ಗಮನಕ್ಕೆ ತಂದಿದ್ದರು. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಕೆಪಿಸಿಸಿ ವತಿಯಿಂದ ನನಗೂ ಹೇಳಿದ್ದರೂ ನಾನು ಸ್ಪರ್ಧಿಸುತ್ತಿದ್ದೆ. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ಮು ತಲೆಬಾಗಿ ಕೆಲಸ ಮಾಡುತ್ತೇವೆ. ಈ ಬಾರಿ ಪುನಃ ಶ್ರೀರಾಮುಲು ಅವರನ್ನು ಖಂಡಿತವಾಗಲು ಸೋಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ತಂತ್ರಗಾರಿಕೆಯನ್ನು ಷಡ್ಯಂತ್ರ ಎಂದು ರಾಮುಲು ಹೇಳುತ್ತಾರೆ. ನಾವು ಬಿಜೆಪಿಯಂತೆ ಆಡಳಿತ ಯಂತ್ರಾಂಗವನ್ನು ದುರುಪ ಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಟಾಂಗ್ ನೀಡಿದರು.