ಬಳ್ಳಾರಿ: ಆ್ಯಕ್ಟರ್ ಮನರಂಜನೆ ನೀಡಬಹುದು, ವರ್ಕರ್ ಮಾತ್ರ ಜನರ ಸಮಸ್ಯೆಗೆ ಸ್ಪಂಧಿಸುತ್ತಾರೆ.. ಬಿಜೆಪಿ ಆ್ಯಕ್ಟರ್, ಕಾಂಗ್ರೆಸ್ ವರ್ಕರ್ ಎಂದು ಕಂಪ್ಲಿ ಶಾಸಕ ಗಣೇಶ್ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನೂರು ಸಾರಿ ಸುಳ್ಳನ್ನು ಹೇಳಿ ಸತ್ಯ ಮಾಡಲು ಹೊರಟಿದೆ. ಶಾಂತ, ರಾಮುಲು, ದೇವೇಂದ್ರಪ್ಪ ಗೆದ್ದರೂ ಜನರ ಸಮಸ್ಯೆ ವಿರುದ್ಧ ಧ್ವನಿ ಎತ್ತಿಲ್ಲ.
ಮೋದಿ ಹೆಸರಿನಲ್ಲಿ ಹೊರಟಿದ್ದಾರೆ, ಸಂಸದರಾಗಿ ಜವಾಬ್ದಾರಿ ನಿರ್ವಹಿಸಿಲ್ಲ ಎಂದು ಶ್ರೀರಾಮುಲು ವಿರುದ್ಧ ಶಾಸಕ ಗಣೇಶ ವಾಗ್ದಾಳಿ ನಡೆಸಿದರು. ಚುನಾವಣೆ ಬಂದಾಗ ಬಂಡಿಯಲ್ಲಿ ಹೋಗಿ ಟೀ ಕುಡಿಯುತ್ತಾರೆ..ಇದು ಆ್ಯಕ್ಟಿಂಗ್ ಅಂತಾ ಗೊತ್ತಾಗುತ್ತೆ.. ಅನೇಕ ಸುಳ್ಳಗಳ ಭರವಸೆ ಕೊಟ್ಟು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದ್ದರಿಂದ ನಾವುಗಳು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಶಾಸಕರು ಒಟ್ಟಾಗಿ ಕೆಲಸ ಮಾಡ್ತೇವೆ ಎಂದು ಹೇಳಿದರು.