ಬೆಂಗಳೂರು: ಮಹಿಳೆ ಮೇಲೆ BMTC ಕಂಡಕ್ಟರ್ ಹಲ್ಲೆ ಕೇಸ್ ಬೆನ್ನಲ್ಲೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಟಿಕೆಟ್ ವಿಚಾರವಾಗಿ ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಕೇಳಿ ಬಂದಿದ್ದು ಚೆಕ್ಕಿಂಗ್ ಇನ್ಸೆಕ್ಟರ್ ವಿರುದ್ಧ ಸಿಡಿದೆದ್ದ ಸ್ಟೂಡೆಂಟ್ ಹಲ್ಲೆಗೊಳಗಾದ ವಿದ್ಯಾರ್ಥಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಘಟನೆ ಸಂಬಂಧ ಬಿಎಂಟಿಸಿಗೆ ಮೇಲ್ ಮೂಲಕ ದೂರು ನೀಡಲಾಗಿದೆ.
ಅಷ್ಟಕ್ಕೂ ಏನಾಯ್ತು?
ಬೆಳ್ಳಂದೂರಿನಿಂದ ಸರ್ಜಾಪುರಕ್ಕೆ ವಿದ್ಯಾರ್ಥಿ ಪ್ರಯಾಣ ಅಸ್ಸಾಂ ಮೂಲದ ಕಮರುಲ್ BMTCಯಲ್ಲಿ ಪ್ರಯಾಣ ಕಮರುಲ್ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿ ಸ್ಟೂಡೆಂಟ್ ಕಳೆದ ವಾರ ನಡೆದಿದ್ದ ಪ್ರಕರಣ ಈಗ ಬೆಳಕಿಗೆ ಬಸ್ ಹತ್ತಿದ ಚೆಕ್ಕಿಂಗ್ ಇನ್ಸ್ ಪೆಕ್ಟರ್, ಟಿಕೆಟ್ ಚೆಕ್ಕಿಂಗ್ ಟಿಕೆಟ್ ಎಲ್ಲಿ ಎಂದು ಪ್ರಶ್ನೆ ಇಬ್ಬರ ನಡುವೆ ವಾಗ್ವಾದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಹಲ್ಲೆ ಆರೋಪ ದೈಹಿಕವಾಗಿ ಹಲ್ಲೆ ಮಾಡಿದ್ದಾರೆಂದು ವಿದ್ಯಾರ್ಥಿ ಆರೋಪ ಘಟನೆಯ ಬಳಿಕ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಘಟನೆಯ ಬಗ್ಗೆ ಬಿಎಂಟಿಸಿಗೆ ದೂರು ನೀಡಿದ ಕಮರುಲ್
ವಿದ್ಯಾರ್ಥಿ ಆರೋಪವೇನು..?
ಚೆಕ್ಕಿಂಗ್ ಇನ್ಸ್ ಪೆಕ್ಟರ್ ನಾನೂ ಒಟ್ಟಿಗೆ ಬಸ್ ಹತ್ತಿದ್ವಿ ಸಿಬ್ಬಂದಿ ಟಿಕೆಟ್ ಎಲ್ಲಿ ಎಂದು ಏರು ಧ್ವನಿಯಲ್ಲಿ ಪ್ರಶ್ನೆ ನಾನು ಈಗ ತಾನೇ ಬಸ್ ಹತ್ತಿದ್ದು ಎಂದು ಹೇಳಿದ್ದೆ..! ಬೇಕಿದ್ದರೆ ಸಿಟಿ ಟಿ.ವಿ ಚೆಕ್ ಮಾಡಿ ಎಂದು ಹೇಳಿದ್ದೆ ಬಟ್ ಸಿಬ್ಬಂದಿ ನನ್ ಮಾತು ಕೇಳಲು ರೆಡಿ ಇರ್ಲಿಲ್ಲ ಕೆಟ್ಟ ಪದದಲ್ಲಿ ಬೈದು ನನ್ ಮೇಲೆ ಹಲ್ಲೆ ಮಾಡಿದ್ರು ಬಲವಂತವಾಗಿ ನನ್ ಕಿಸೆಯಲ್ಲಿದ್ದ ದುಡ್ಡು ತಗೊಂಡ್ರು ನನ್ನ ಮೇಲೆ ಅವರು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ವಿಡಿಯೋ ಮಾಡಲು ಶುರು ಮಾಡ್ತಿದ್ದಂಗೆ ಸೈಲೆಂಟ್ ನನಗೆ ಅನ್ಯಾಯವಾಗಿದೆ ಬಿಎಂಟಿಸಿ ಸಿಬ್ಬಂದಿ ನಡೆ ಸರಿಯಲ್ಲ ಘಟನೆಯ ಬಗ್ಗೆ ಮೇಲ್ ಮೂಲಕ ಯುವಕ ದೂರು