ವಿಜಯಪುರ:- ಚಡಚಣ ಪಟ್ಟಣದಲ್ಲಿ ಇಂದು ಕೇಂದ್ರ ಸೇನಾಪಡೆ ಮತ್ತು ಚಡಚಣ ಜನ ಸ್ನೇಹಿ ಪೋಲಿಸ್ ಠಾಣೆಯ ಸಿಬ್ಬಂದಿಗಳಿಂದ ಬೀದಿಗಳಲ್ಲಿ ಪಥ ಸಂಚಲನವು ಸಿ.ಪಿ.ಆಯ್. ಎಚ್. ಡಿ. ಮುಲ್ಲಾ, ಪಿ.ಎಸ್.ಐ. ರಾಘವೇಂದ್ರ ಖೋತ, ಝಳಕಿ ಪಿ.ಎಸ್.ಐ. ಹೊನ್ನಪ್ಪ ತಳವಾರ ಇವರುಗಳ ನೇತ್ರತ್ವದಲ್ಲಿ ಬ್ಯಾಂಡ್ ಬಾರಿಸುವುದರ ಮೂಲಕ ಪಥ ಸಂಚಲನಕ್ಕೆ ಚಾಲನೆ ನೀಡಲಾಯಿತು.
ಬಸವೇಶ್ವರ ಸರ್ಕಲ್ದಿಂದ ಪ್ರಾರಂಭವಾದ ಪಥ ಸಂಚಲನವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಣಪತಿ ಚೌಕ, ಅಗಸಿ ಮೂಲಕ ಪಲ್ಯದ ಕಟ್ಟೆ ನಂತರ ಪಂಢರಪುರ ರಸ್ತೆಯ ಮೂಲಕ ಜನಸ್ನೇಹಿ ಪೋಲಿಸ್ ಠಾಣೆಗೆ ತಲುಪಿತು. ಪಥ ಸಂಚಲನದಲ್ಲಿ ನಾಗರಿಕರು ಹೂಮಾಲೆ ಹಾಕಿ ಸತ್ಕರಿಸಿದರು. ಇನ್ನೂ ಕೆಲ ಮಹಿಳೆಯರು ಆರತಿ ಎತ್ತಿ ಹರಸಿ ಸಂತೋಷ ಪಟ್ಟರು. ನಂತರ ಜನಸ್ನೇಹಿ ಠಾಣೆಯ ಪಿ. ಎಸ್.ಐ, ರಾಘವೇಂದ್ರ ಖೋತ ಮಾತನಾಡಿ ದರು. 55 ಜನ ಸೇನಾಪಡೆ ಪಥ ಸಂಚಲನದಲ್ಲಿ ಭಾಗಿಯಾಗಿ ಪಟ್ಟಣದ ನಾಗರಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.
ಹಿರಿಯ ಸೈನಿಕರಾದ ಜಹಾಯಿ ಪನಸಾ ಇನಸ್ಪೆಕ್ಟರ್ ಮತ್ತು ಧರಮ್ ಪಾವು ಸಿಂಗ ಸುಬ ಇನಸ್ಪೆಕ್ಟರ್ ಸೈನಿಕರ ಮುಂದಾಳತ್ವ ವಹಿಸಿದ್ದರು. ಸಂಗಮೇಶ್ವರ ಸಂಸ್ಥೆಯ ಅಧ್ಯಕ್ಷ ಜಿ. ಡಿ. ಪಾವಲೆ ಮತ್ತು ನಿರ್ದೇಶಕ ದ್ಯಾವಪ್ಪಗೌಡ ಪಾಟೀಲ, ಸೈನಿಕರಿಗೆ ಹೂಮಾಲೆ ಹಾಕಿ ಅವರ ಕಾರ್ಯ ಮೆಚ್ಚುಗೆ ವ್ಯಕ್ತ ಪಡಿಸಿದರು.