ಬೆಂಗಳೂರು: ನಾವು ಯಾವ ದೇಶದಲ್ಲಿ ಇದ್ದೇವೆ? ಒಂದೊಂದು ಬಾರಿ ನಮಗೇ ಗೊಂದಲ ಆಗ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ತೆರಿಗೆ ಕಟ್ಟುವಂತೆ ಎಐಸಿಸಿಗೆ ಐಟಿ ನೋಟಿಸ್ ನೀಡಿರುವ ವಿಚಾರವಾಗಿ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಯಾವ ದೇಶದಲ್ಲಿ ಇದ್ದೇವೆ ಎಂದು ಒಂದೊಂದು ಸಾರಿ ಗೊಂದಲ ಆಗ್ತಾ ಇದೆ. ಹಿಂದಿನ ಚುನಾವಣೆಯಲ್ಲಿ ಯಾರು ಹಣ ನೀಡುವ ಹಾಗಿರಲಿಲ್ಲ. ಬದಲಾಗಿ, ಚುನಾವಣೆ ಬಾಂಡ್ ಕೊಡಬಹುದು ಎಂದು ಹೇಳಿದ್ದರು.ಎಲ್ಲಾ ಪಕ್ಷಗಳು ದೇಣಿಗೆ ಬಾಂಡ್ ಗಳ ರೂಪದಲ್ಲಿ ಪಡೆದರು. ಚುನಾವಣಾ ಆಯೋಗ ಸಹ ಹೇಳಿತ್ತು.ಈಗ ಚುನಾವಣೆ ಬಾಂಡ್ ತೆಗೆದುಕೊಂಡಿದ್ದು ತಪ್ಪು ಎಂದು ಹೇಳುತ್ತಿದ್ದಾರೆ ಆದರೆ,
ಬಿಜೆಪಿಯವರೇ ಹೆಚ್ಚು ದೇಣಿಗೆ ಪಡೆದಿದ್ದಾರೆ ಎಂದರು. ಬಿಜೆಪಿಯವರು 8200 ಕೋಟಿ ಹಣ ತೆಗೆದುಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ಹೇಳುತ್ತಿದೆ ಇದು ಭ್ರಷ್ಟಾಚಾರ, ಲಂಚ ಪಡೆದಂತೆ ಎಂದು. ಆದರೆ, ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನ ಬ್ಯಾಂಕ್ ಖಾತೆಯನ್ನು ಸ್ಥಗಿತ ಮಾಡಿದ್ದಾರೆ. ಕೋರ್ಟ್ ಗೆ ಹೋದ ಮೇಲೆ ರಿಲೀಸ್ ಮಾಡಿದ್ರು. ಈಗ ಇದ್ದಕ್ಕಿದ್ದಂತೆ ನೋಟಿಸ್ ಕೊಡುವುದಾದರೆ ಬಿಜೆಪಿಯರವರಿಗೆ ನೋಟಿಸ್ ಕೊಡಬೇಕಲ್ಲ ಎಂದು ಪ್ರಶ್ನಿಸಿದರು.