ಬೆಂಗಳೂರು: ಕಾಂಗ್ರೆಸ್ ನಾಲ್ಕು ಕ್ಷೇತ್ರಗಳ ಟಿಕೆಟ್ ಕಗ್ಗಂಟಿಗೆ ಬ್ರೇಕ್ ಬಿದ್ದಿದೆ. ಗೊಂದಲಗಳ ನಡುವೆಯೂ ಹೈಕಮಾಂಡ್ ಟಿಕೆಟ್ ಘೋಷಿಸಿದೆ.ಬಳ್ಳಾರಿ,ಚಾಮರಾಜನಗರ,ಚಿಕ್ಕಬಳ್ಳಾಪುರದಲ್ಲಿ ನಿರೀಕ್ಷಿಸಿದಂತೆಯೇ ಟಿಕೆಟ್ ಅನೌನ್ಸ್ ಮಾಡಿದೆ.ಕಗ್ಗಂಟ್ಟಿದ್ದ ಕೋಲಾರಕ್ಕೂ ಟಿಕೆಟ್ ಘೋಷಿಸಿದೆ.ಯಾರು ಕೂಡ ಲಕ್ಷಣ ರೇಖೆ ದಾಟಬಾರದೆಂದು ಕೋಲಾರ ಅಸಮಧಾನಿತರಿಗೆ ಕನಕಪುರ ಬಂಡೆ ಎಚ್ಚರಿಕೆ ನೀಡಿದ್ದಾರೆ. ಯೆಸ್, ಕಳೆದೊಂದು ವಾರದಿಂದ ಕಗ್ಗಂಟಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಹೈಕಮಾಂಡ್ ಟಿಕೆಟ್ ಘೋಷಿಸಿದೆ.
ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಕ್ಕೆ ಮಣೆ ಹಾಕದೆ ತಟಸ್ಥ ಅಭ್ಯರ್ಥಿಯನ್ನ ಕಣಕ್ಕಿಳಿಸಿದೆ.ಮಾಜಿ ಮೇಯರ್ ವಿಜಯಕುಮಾರ್ ಪುತ್ರ ಗೌತಮ್ ಗೆ ಟಿಕೆಟ್ ನೀಡಿದೆ..ಈ ಮೂಲಕ ಇಬ್ಬರು ನಾಯಕರ ತಂಡಕ್ಕೂ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆ.ಅಲ್ದೇ ಅಸಮಧಾನಿತರಿಗೆ ವಾರ್ನಿಂಗ್ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಯಾರೇ ಆದರೂ ಲಕ್ಷಣ ರೇಖೆ ದಾಟಬಾರದು.ಎರಡು ಬಣಗಳಿಗೂ ನಾವು ಟಿಕೆಟ್ ನೀಡಿಲ್ಲ.ಕೋಲಾರ ಸೀಟ್ ಗೆಲ್ಲೋದು ಬಿಡೋದು ನಂತರದ್ದು,ಪಕ್ಷದಲ್ಲಿ ಶಿಸ್ತು ಇರಬೇಕೆಂದು ವಾರ್ನಿಂಗ್ ನೀಡಿದ್ದಾರೆ.