ಶಿವಮೊಗ್ಗ: ವರದಕ್ಷಿಣೆ ಕಿರುಕುಳದಿಂದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ತುಂಗಾ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 31 ವರ್ಷದ ಅಶ್ವಿನಿ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ದೂರಿನಲ್ಲಿ ಇರುವಂತೆ ಐದು ವರ್ಷದ ಹಿಂದೆ ಅಶ್ವಿನಿ ಅವರನ್ನು ಗಾಡಿ ಕೊಪ್ಪದ ನಿವಾಸಿಯಾದ ಅಭಿಷೇಕ್ ಜೊತೆ ಮದುವೆಯಾಗಿದ್ದರು.
ಅಶ್ವಿನಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದು ವಿದ್ಯಾವಂತರಾಗಿದ್ದರು . ಆದರೆ ಮದುವೆ ಆದಾಗಿನಿಂದ ಅತ್ತೆ ಮಾವ ಕಿರುಕುಳ ಕೊಟ್ಟು ಹಲವು ಬಾರಿ ಹಲ್ಲೆಯನ್ನು ಸಹ ಮಾಡಿದ್ದರು. ಅನೇಕ ಬಾರಿ ಗುರು ಹಿರಿಯರು ಬುದ್ಧಿ ಹೇಳಿ ಬರುತ್ತಿದ್ದ್ದರು. ಆದರೆ ಇತ್ತೀಚೆಗೆ ವರದಕ್ಷಿಣೆ ಸಾಕಾಗುತ್ತಿಲ್ಲವೆಂದು ಕಿರುಕುಳ ನೀಡಿದ್ದರಿಂದ ಅಶ್ವಿನಿ ಕೆಲಸದ ಸಂಬಳದ ಮೇಲೆ ಲಕ್ಷ ಲಕ್ಷ ಸಾಲ ಮಾಡಿ ಕೊಟ್ಟಿರುತ್ತಾರೆ. ಅಲ್ಲದೆ ಖರ್ಚಿಗೂ ಹಣವಿಟ್ಟುಕೊಳ್ಳದೆ ಪೂರ್ತಿ ಹಣ ಅತ್ತೆಗೆ ನೀಡಬೇಕೆಂದು ಕಿರುಕುಳ ಕೊಟ್ಟಿದ್ದಾರೆ.
ನಂತರ ಕಂಪನಿಯ ವ್ಯವಸ್ಥಾಪಕರ ಬಳಿ ಸಂಬಳದ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯ ಮಾಡಿದ್ದು ಇದು ಅಸ್ವಿನಿಗೆ ಮುಜುಗರ ತರುವ ಸಂಗತಿ ಉಂಟುಮಾಡಿತ್ತು. ಎಲ್ಲ ಸಮಸ್ಯೆಗಳ ಬಗ್ಗೆ ಅಶ್ವಿನಿ ಮನೆಯವರ ಬಳಿ ಹೇಳಿಕೊಂಡಿದ್ದರು. ನಿನ್ನೆ ದಿನ ಸಂಜೆ 7:30ಕ್ಕೆ ಕರೆ ಮಾಡಿ ನನಗೆ ಇಲ್ಲಿ ಬದುಕಲು ಸಾಧ್ಯವಿಲ್ಲ ದಯವಿಟ್ಟು ಕರೆದುಕೊಂಡು ಬನ್ನಿ ಎಂದು ಸಹ ಹೇಳಿದ್ದಾರೆ. ಇದರ ಎಲ್ಲಾ ರೆಕಾರ್ಡ್ ಗಳು ಅವರ ಇದೆ ಎಂದು ತಂಗಿ ತಿಳಿಸಿದ್ದಾರೆ. ನಂತರ
ಗಾಬರಿಯಿಂದ ತಂಗಿ ಚಿಕ್ಕಪ್ಪನನ್ನು ಕರೆದುಕೊಂಡು ಗುಡಿಕೊಪ್ಪದ ಲಗನ್ ಮಂದಿರದ ಹತ್ತಿರ ಇರುವ ಅಶ್ವಿನಿ ಅವರ ಮನೆಗೆ ಹೋಗಿ ಅತ್ತೆಯ ಬಳಿ ಅಶ್ವಿನಿ ಎಲ್ಲಿ ಎಂದು ಕೇಳಿದಾಗ ಅತ್ತೆ ಸಿಟ್ಟಿನಿಂದ ಅಶ್ವಿನಿ ಬಾಗಿಲು ಹಾಕಿಕೊಂಡಿರುವುದಾಗಿ ತಿಳಿಸಿದ್ದರು. ನಂತರ ಬಾಗಿಲು ಒಡೆದು ನೋಡಿದಾಗ ಅಶ್ವಿನಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.