ಬೆಂಗಳೂರು : ಹೇ ಏನೋ ಗುರಾಯಿಸುತ್ತಿಯಾ…. ನಾನು ಯಾರು ಗೊತ್ತಾ…? ನೀನು ಡಿಪಾರ್ಟ್ಮೆಂಟ್ ಆದ್ರೆ ನನ್ನನು ಏನು ಮಾಡೋದಿಕ್ಕೆ ಆಗೋದಿಲ್ಲ ಎಂದು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ…
ಹೀಗೆ ಕಾಂಗ್ರೆಸ್ ಮುಖಂಡ ಬೆಸ್ತಮಾನಹಳ್ಳಿ ಯಲ್ಲಪ್ಪ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅಶೋಕ್ ಮೇಲೆ ಮಿಲ್ಕ್ ಟ್ರೆಯಿಂದ ಹಲ್ಲೆ ನಡೆಸುತ್ತಿರುವ ಸಿಸಿ ಕ್ಯಾಮರಾ ದೃಶ್ಯ ಕಂಡು ಬಂದದ್ದು ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ. ನಿನ್ನೆ ರಾತ್ರಿ 7:45 ರ ಸುಮಾರಿಗೆ ರಾಮದೇವರ ಸರ್ಕಲ್ ಬಳಿಯ ಧನಲಕ್ಷ್ಮೀ ಸ್ಟೋರ್ಗೆ ಹಾಲು ಖರೀದಿಸಲು ಅಶೋಕ್ ಕಾರಿನಲ್ಲಿ ಬಂದಿದ್ದಾರೆ. ಕಾರು ನಿಲ್ಲಿಸಿ ಕೆಳಗಿದಾಗ ಅಲ್ಲಿಯೇ ಇನ್ನೊಂದು ಬದಿಯಲ್ಲಿ ನಿಂತಿದ್ದ ಯಲ್ಲಪ್ಪ ಏನೋ ಗುರಾಯಿಸುತ್ತಿಯಾ….! ನಾನು ಯಾರೂ ಗೊತ್ತಾ…? ನೀನು ಡಿಪಾರ್ಟ್ಮೆಂಟ್ ಆದ್ರೆ ನನ್ನನು ಏನೂ ಮಾಡೋದಿಕ್ಕೆ ಆಗೋಲ್ಲ ಎಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದ ಕಾಂಗ್ರೆಸ್ ಮುಖಂಡ ಯಲ್ಲಪ್ಪ ಏಕಾಏಕಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅಶೋಕ್ ಮೇಲೆ ಮಿಲ್ಕ್ ಟ್ರೆಯಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ವೇಳೆ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಇನ್ನೂ ಕಾಂಗ್ರೆಸ್ ಮುಖಂಡ ಯಲ್ಲಪ್ಪ ಸ್ಥಳೀಯ ಶಾಸಕ ಬಿ ಶಿವಣ್ಣ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಪರಮಾಪ್ತನಾಗಿದ್ದು, ಅದೇ ದರ್ಪದಲ್ಲಿ ಪೊಲೀಸಪ್ಪನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಐದಾರು ತಿಂಗಳ ಹಿಂದೆ ಕರ್ಪೂರು ಗ್ರಾಮ ಪಂಚಾಯತಿ ಸದಸ್ಯ ತಿಮ್ಮರಾಜು ಎಂಬುವವರ ಮೇಲೂ ಯಲ್ಲಪ್ಪ ಹಲ್ಲೆ ನಡೆಸಿದ್ದ ಅದ್ರೆ ಪೊಲೀಸರು ಯಾವುದೇ ಕ್ರಮ ಜರುಗಿಸಿರಲಿಲ್ಲ. ಈ ಬಾರಿ ಹಲ್ಲೆ ನಡೆಸಿದ ಯಲ್ಲಪ್ಪನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿದ ಆನೇಕಲ್ ಪೊಲೀಸರು ಜೈಲಿಗಟ್ಟಿದಲ್ಲದೆ ರೌಡಿ ಶೀಟ್ ಓಪನ್ ಮಾಡಿದ್ದಾರೆ.
ಒಟ್ನಲ್ಲಿ ಕುಡಿದ ನಶೆಯೋ ಅಧಿಕಾರದ ಮದವೋ ಗೊತ್ತಿಲ್ಲ. ಆತ ಪೊಲೀಸ್ ಸಿಬ್ಬಂದಿ ಎಂಬುದನ್ನು ತಿಳಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪೊಲೀಸರಿಗೆ ಈ ಗತಿಯಾದರೆ ಸಾರ್ವಜನಿಕರ ಪರಿಸ್ಥಿತಿ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ಇನ್ನಾದರೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಪುಡಾರಿಗಳ