ಇಂಡಿಯನ್ ಪ್ರೀಮಿಯರ್ ಲೀಗ್ ನ ಸೀಸನ್ 17 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿರುವ 3 ಪಂದ್ಯದಲ್ಲಿ ಒಂದರಲ್ಲಿ ಗೆಲುವು, ಎರಡರಲ್ಲಿ ಸೋಲು ಕಂಡಿದೆ.
ಆರ್ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಸವಾಲು ಎದುರಿಸಲಿದೆ. ಪಂದ್ಯ ಜಯಿಸಬೇಕೆಂದರೆ ಆರ್ಸಿಬಿಗೆ ಈ ಮೂರು ಬದಲಾವಣೆ ಅಗತ್ಯವಿದೆ.
ಮಹಿಳಾ ರೋಗಿಗಳ ನಗ್ನ ಫೋಟೋ ತೆಗೆದು ಅಸಭ್ಯವಾಗಿ ವರ್ತಿಸುತ್ತಿದ್ದ ವೈದ್ಯ ಅರೆಸ್ಟ್!
ಪ್ರತಿ ವರ್ಷದಂತೆ ಈ ವರ್ಷವೂ ಆರ್ಸಿಬಿ ಬೌಲಿಂಗ್ನಲ್ಲಿ ಸಮಸ್ಯೆಯನ್ನು ಎದುರಿಸುತ್ತಿದೆ. ಕೆಕೆಆರ್ನ ಆರಂಭಿಕ ಆಟಗಾರರಾದ ಸುನೀಲ್ ನರೇನ್ (47 ರನ್, 22 ರನ್) ಹಾಗೂ ಫಿಲ್ ಸಾಲ್ಟ್ (30 ರನ್, 20 ಎಸೆತ) ಆರಂಭಿಕ 6 ಓವರ್ಗಳಲ್ಲೇ 85 ರನ್ಗಳಿಸಿ ಆರ್ಸಿಬಿ ತಂಡಕ್ಕೆ ಆಘಾತ ನೀಡಿದ್ದರು. ಇನ್ನು ವೆಂಕಟೇಶ್ ಅಯ್ಯರ್ (50 ರನ್) ಹಾಗೂ ನಾಯಕ ಶ್ರೇಯಸ್ ಅಯ್ಯರ್ (39 ರನ್) ಅವರನ್ನು ನಿಯಂತ್ರಿಸುವಲ್ಲೂ ಆರ್ಸಿಬಿ ಬೌಲರ್ಗಳು ಎಡವಿದ್ದರು.
ಇನ್ನು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ಅಜೇಯ 83 ರನ್ ಗಳಿಸಿದರೆ, ತಂಡದಲ್ಲಿರುವ ಸ್ಟಾರ್ ಬ್ಯಾಟರ್ಗಳಾದ ಕ್ಯಾಮೆರಾನ್ ಗ್ರೀನ್ (33 ರನ್), ಗ್ಲೆನ್ ಮ್ಯಾಕ್ಸ್ವೆಲ್ (28 ರನ್) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಇದರ ಪರಿಣಾಮ 7 ವಿಕೆಟ್ ಸೋಲು ಕಂಡಿತು. ಮಂಗಳವಾರ (ಏಪ್ರಿಲ್ 2) ಲಖನೌ ಸೂಪರ್ ಜಯಂಟ್ಸ್ ತಂಡದ ಸವಾಲು ಎದುರಿಸಲಿದ್ದು, ಗೆಲುವಿನ ಲಯಕ್ಕೆ ಮರಳಲು ಆರ್ಸಿಬಿ ಈ 3 ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ.
ಆರ್ಸಿಬಿ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ ರಜತ್ ಪಾಟಿದಾರ್ ಈ ಆವೃತ್ತಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 18 ರನ್ ಗಳಿಸಿದ ಹೊರತಾಗಿಯೂ ಅವರು, ಕಳೆದ 3 ಪಂದ್ಯಗಳಿಂದ ಕೇವಲ 21 ರನ್ ಗಳಿಸಿರುವುದನ್ನು ಗಮನಿಸಿದರೆ ಒತ್ತಡಕ್ಕೆ ಸಿಲುಕಿರುವುದು ಗೋಚರಿಸುತ್ತದೆ. ಅಲ್ಲದೆ ಆತನಿಂದ ಹೇಳಿಕೊಳ್ಳುವಂತಹ ಜೊತೆಯಾಟ ಮೂಡಿಬಂದಿಲ್ಲ. ಆದ್ದರಿಂದ ಆರ್ಸಿಬಿ ಮ್ಯಾನೇಜ್ಮೆಂಟ್ ಲಖನೌ ಸೂಪರ್ ಜಯಂಟ್ಸ್ ಪಂದ್ಯಕ್ಕೆ ಪ್ಲೇಯಿಂಗ್ XIನಲ್ಲಿ ಸುಯೇಶ್ ಪ್ರಭುದೇಸಾಯಿ ಹಾಗೂ ಮಹಿಪಾಲ್ ಲೊಮ್ರರ್ ಅವರಿಗೆ ಸ್ಥಾನ ಕಲ್ಪಿಸಬೇಕು.
ಎಡಗೈ ವೇಗಿ ಯಶ್ ದಯಾಳ್ ಅವರಿಂದ ನಿರೀಕ್ಷಿತ ಫಲಿತಾಂಶ ಇದುವರೆಗೂ ಮೂಡಿಬಂದಿಲ್ಲ. ಕಳೆದ 3 ಪಂದ್ಯಗಳಿಂದ 97 ರನ್ ನೀಡಿ ಮೂರು ವಿಕೆಟ್ ಪಡೆದಿದ್ದಾರೆ. ಶುಕ್ರವಾರ (ಮಾರ್ಚ್ 29) ಕೆಕೆಆರ್ ತಂಡದ ಆರಂಭಿಕ ಸುನೀಲ್ ನರೇನ್ ಅವರು ಯಶ್ ದಯಾಳ್ ಅವರ ಒಂದೇ ಓವರ್ನಲ್ಲಿ 21 ರನ್ ಬಾರಿಸಿದ್ದಾರೆ. ಆದ್ದರಿಂದ ಪ್ಲೇಯಿಂಗ್ XIನಲ್ಲಿ ಯಶ್ ದಯಾಳ್ ಬದಲಿಗೆ ಆಕಾಶ್ ದೀಪ್ಗೆ ಸ್ಥಾನ ಕಲ್ಪಿಸಬೇಕು. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಪಂದ್ಯದಲ್ಲೇ ಆಕಾಶ್ ದೀಪ್ ತಮ್ಮ ಬೌಲಿಂಗ್ ಮೂಲಕ ಗಮನ ಸೆಳೆದಿದ್ದು, ವೇಗದ ಬೌಲಿಂಗ್ ರೂಪದಲ್ಲಿ ವೈವಿಧ್ಯತೆ ತೋರಿ ಎದುರಾಳಿ ಬ್ಯಾಟರ್ಗಳ ರನ್ ದಾಹಕ್ಕೆ ಕಡಿವಾಣ ಹಾಕಬಲ್ಲರು. ಹಾಗಾಗಿ ಇವರಿಗೆ ಸ್ಥಾನ ನೀಡಬೇಕು.
ವೆಸ್ಟ್ ಇಂಡೀಸ್ ವೇಗಿ ಆಲ್ಝಾರಿ ಜೋಸೆಫ್ ಅವರಿಂದ ನಿರೀಕ್ಷಿತ ಬೌಲಿಂಗ್ ಪ್ರದರ್ಶನ ಮೂಡಿಬರದಿರುವುದು ತಂಡದ ಸೋಲಿಗೆ ಒಂದು ಕಾರಣವಾಗಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪವರ್ಪ್ಲೇನಲ್ಲಿ ತಮ್ಮ 2 ಓವರ್ಗಳಲ್ಲಿ 34 ರನ್ ನೀಡಿರುವ ಜೋಸೆಫ್, ಕಳೆದ ಮೂರು ಪಂದ್ಯಗಳಿಂದ 115 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದಿದ್ದು ಮಿನಿ ಹರಾಜಿನಲ್ಲಿ ತಮಗೆ ಸಿಕ್ಕ ಭಾರೀ ಮೊತ್ತಕ್ಕೆ ಬಮೌಲ್ಯ ತಮದುಕೊಡುವಲ್ಲಿ ಎಡವಿದ್ದಾರೆ. ಇವರನ್ನು ಪ್ಲೇಯಿಂಗ್ XIನಿಂದ ಹೊರಗಿಟ್ಟು, ಲಾಕಿ ಫರ್ಗ್ಯೂಸನ್ ಅಥವಾ ವಿಲ್ ಜ್ಯಾಕ್ಸ್ಗೆ ಅವಕಾಶ ಕಲ್ಪಿಸಬೇಕು. ಇಂಗ್ಲೆಂಡ್ನ ಯುವ ಆಲ್ರೌಂಡರ್ ವಿಲ್ ಜ್ಯಾಕ್ಸ್, ಸಿಡಿಲಬ್ಬರದ ಬ್ಯಾಟಿಂಗ್ನಿಂದ ಅಲ್ಲದೆ ಬೌಲಿಂಗ್ ಮೂಲಕವು ತಂಡಕ್ಕೆ ಗೆಲುವು ತಂದುಕೊಡಬಲ್ಲರು