ಬೆಂಗಳೂರು: ಬೇಸಿಗೆ ಆರಂಭವಾಗುತ್ತಿದಂತೆ ರಾಜ್ಯದಲ್ಲಿ ಬಿರು ಬಿಸಿಲು ಶುರುವಾಗಿದೆ. ಉರಿ ಬಿಸಿಲು ಜನರನ್ನು ಸುಡಲು ಆರಂಭಿಸಿದ್ರೆ. ಒಂದು ಕಡೆ ಬೇಸಿಗೆ ತಾಪದಿಂದ ಜನ ಬೇಸತ್ತು ಹೋಗಿದ್ರೆ ಮತ್ತೊಂದು ಕಡೆ ತಾಪಮಾನದ ಏರಿಳಿತ ಮುಂದುವರೆದಿದೆ. ಮುಂದಿನ ಒಂದು ವಾರ ಅಂದ್ರೆ ಏ.2 ರತನಕ ರಾಜಧಾನಿಯಲ್ಲಿ ತಾಪಮಾನ ಮತ್ತಷ್ಟು ಏರಿಕೆ ಆಗಲಿದೆ. ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಹೌದು… ಈ ಬಾರಿ ಫೆಬ್ರವರಿಯಿಂದಲೇ ಸುಡುಬಿಸಿಲು ಶುರುವಾಗಿದ್ದು, ಜನ ಬೇಸತ್ತು ಹೋಗಿದ್ದಾರೆ. ಬೆಳ್ಳಗೆ 8 ಗಂಟೆಯಾದರೆ ಸಾಕು ಮನೆಯಿಂದ ಹೊರ ಬರಲು ಆಗದೇ ಜನ ತತ್ತರಿಸಿದ್ದು, ಸಾಮಾನ್ಯವಾಗಿ ಬೆಂಗಳೂರಿನಲ್ಲಿ 29ರಿಂದ 30ಡಿಗ್ರಿ ತಾಪಾಮಾನ ತಲುಪುತ್ತಿತ್ತು. ಆದರೆ ಈ ವರ್ಷ 36 ಡಿಗ್ರಿ ದಾಟಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ.
Lok Sabha Election 2024: ಕರ್ನಾಟಕದಲ್ಲಿ ಚುನಾವಣೆ ನಡೆಯುವ ದಿನ ಸಾರ್ವತ್ರಿಕ ರಜೆ ಘೋಷಣೆ!
ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟು ತೀವ್ರ ಬರಪರಿಸ್ಥಿತಿ ಉಂಟಾಗಿರುವುದರಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ..ಸಣ್ಣಪುಟ್ಟ ಕೆರೆಕಟ್ಟೆಗಳು ಬತ್ತಿ ಹೋಗಿವೆ, ಅಂತರ್ಜಲ ತೀವ್ರವಾಗಿ ಕುಸಿದಿವೆ. ಹೀಗಾಗಿ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ, ಉಷ್ಣಾಂಶ ಅಧಿಕವಾಗಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಇದರ ಪರಿಣಾಮ ಕೇವಲ ಜನರಷ್ಟೇ ಅಲ್ಲದೆ ಪ್ರಾಣಿ ಪಕ್ಷಿಗಳು ಕೂಡ ಎದುರಿಸುವಂತಾಗಿದೆ…
ಪ್ರತಿ ವರ್ಷವೂ ತಾಪಮಾನ ಏರುತ್ತಲೇ ಇದೆ. ಮನುಷ್ಯರಾದರೆ ಅಲ್ಲಿ ಇಲ್ಲಿ ಹುಡುಕಿ ಪರಿಚಯಸ್ಥರ ಬಳಿ ಕೇಳಿಯೋ, ದುಡ್ಡು ಕೊಟ್ಟೋ ತಮಗೆ ಬೇಕಾದ ಆಹಾರ, ನೀರು ಸೇವಿಸುತ್ತಾರೆ. ಆದರೆ ಪ್ರಾಣಿಗಳ ಕಥೆ ಏನು? ಅದಕ್ಕೆ ನಾವೇ ಸಹಾಯ ಮಾಡಬೇಕು. ಇಗಾಗಲೇ ಹಲವಾರು ಪಕ್ಷಿಗಳು ಬೇಸಿಗೆಯ ಬಿಸಿಲಿಗೆ ಯಾವುದೇ ಆಹಾರ ನೀರು ಸಿಗದೆ ಒದ್ದಾಡುತ್ತಿವೆ. ಹಲವಾರು ಪಕ್ಷಿಗಳು ಸತ್ತು ಹೋಗಿವೆ.. ಇದನ್ನು ತಡೆಯಬೇಕಿದೆ ಎನ್ನುತ್ತಾರೆ ತಜ್ಞರು..
ಬೆಂಗಳೂರು ಸಾಕಷ್ಟು ಅಭಿವೃದ್ಧಿ ಆಗ್ತಾ ಇದೆ ..ಈ ಅಭಿವೃದ್ಧಿ ಗಳಿಗೆ ಮರ ಕಡಿಯುವುದು ಮೂಲ ಕಾರಣ ..ಇದರಿಂದ ಮಳೆ ಕೊರತೆ,ಕೆರೆ ಬತ್ತಿ ಹೋಗುವುದು ,ಅಂತರ್ಜಲ ಕಡಿಮೆಯಾಗುವುದು ಹೆಚ್ಚಾಗುತ್ತಿದೆ.. ಜನರು ಸಾಕಷ್ಟು ನರಳುವಂತಾಗಿದೆ ..ಆದರೆ ಇದರ ಪರಿಣಾಮ ನೇರವಾಗಿ ನಿಸರ್ಗದಲ್ಲಿ ಬದುಕುತ್ತಿರುವ ಮೂಕ ಪಕ್ಷಿಗಳ ಮೇಲೆ ಪ್ರಭಾವ ಬೀರುತ್ತದೆ ..ಅದಕ್ಕಾಗಿ ಇನ್ನಾದರೂ ಜನರು ಪಕ್ಷಿಗಳಿಗೆ ಆಹಾರ ನೀರನ್ನು ಇಟ್ಟು ಸಹಾಯ ಮಾಡುವುದು ಉತ್ತಮ ಎಂದು ತಜ್ಞರು ಜನರಿಗೆ ಮನವಿ ಮಾಡಿದ್ದಾರೆ..
ಒಟ್ಟಾರೆ ಜನರಿಗೆ ಬೇಸಿಗೆಕಾಲದಲ್ಲಿ ನೀರು ಸರಿಯಾಗಿ ದೊರಕುತ್ತಿಲ್ಲ ..ಪಾಪ ಇನ್ನು ಮೂಕ ಪಕ್ಷಿಗಳು ನೀರು ಆಹಾರವಿಲ್ಲದೆ ನರಳಿ ನರಳಿ ಸಾಯುತ್ತಿದೆ..ಅದನ್ನು ಕಾಪಾಡುವುದು ನಮ್ಮ ಕರ್ತವ್ಯ..ಮುಂದಿನ ದಿನಗಳಲ್ಲಿ ಬಿರು ಬೇಸಿಗೆ ಇರುವುದರಿಂದ ಜನರು ತಮ್ಮ ಮನೆಯ ಮೇಲೆ ಸಣ್ಣ ಬಟ್ಟಲ್ಲಿನಲ್ಲಿ ನೀರು ಆಹಾರ ಇಟ್ಟು ಪಕ್ಷಿಗಳಿಗೆ ಅಳಿಲು ಸೇವೆಯನ್ನು ಅಳಿಲು ಸಹಾಯವನ್ನು ಮಾಡಬಹುದು ..