ಕೋಲಾರ: ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಸಂಸದರ ಮನೆಗೆ ಭೇಟಿ ನೀಡಿದ್ದು ಎನ್ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು ರಿಂದ ಸಂಸದ ಮುನಿಸ್ವಾಮಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು.
ಕೋಲಾರದ ಎಸ್ ಜಿ ಲೇಔಟ್ ನಲ್ಲಿರುವ ಮುನಿಸ್ವಾಮಿ ಮನೆ ಮಲ್ಲೇಶ್ ಬಾಬುಗೆ ಜೆಡಿಎಸ್ ನ ಶಾಸಕರಾದ ವೆಂಕಟಶಿವಾರೆಡ್ಡಿ, ಸಂಮೃದ್ದಿ ಮಂಜುನಾಥ್,ಶಿಡ್ಲಘಟ್ಟ ಶಾಸಕ ಜೆ ಕೆ ಕೃಷ್ಣಾರೆಡ್ಡಿ ಸಾಥ್ ನೀಡಿದರು. ಸಿಹಿ ತಿನ್ನಿಸಿ ಪರಸ್ಪರ ಒಬ್ಬರಿಗೊಬ್ಬರು ಶುಭಾಶಯ ಚುನಾವಣೆಯಲ್ಲಿ ಸಹಾಯ ಮಾಡುವಂತೆ ಮುನಿಸ್ವಾಮಿ ಗೆ ಮನವಿ ಮಾಡಿದ ಮಲ್ಲೇಶ್ ಬಾಬು
ಅಭ್ಯರ್ಥಿ ಆಯ್ಕೆ ವಿಚಾರವಾಗಿ ಚರ್ಚೆ ನಡೆಯುತ್ತಿತ್ತು, ಮೂವರು ಅಭ್ಯರ್ಥಿಗಳು ಕಣಕ್ಕೆ ಇಳಿಯುತ್ತೇವೆ ಎಂದು ಹೈಕಮಾಂಡ್ ಬಳಿ ಹೇಳಿದ್ರಿ. ಮೂವರಲ್ಲಿ ಎಲ್ಲರೂ ಸೇರಿ ನನ್ನನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ನಮ್ಮ ತಂದೆ ತಾಯಿ ಬ್ಯಾಗ್ರೌಂಡ್ ನೋಡಿಕೊಂಡು ನನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ವಿದ್ಯಾಬ್ಯಾಸದ ನಂತರ ಮೂವತ್ತು ವರ್ಷಗಳಿಂದ ಕೋಲಾರದಲ್ಲಿ ಇದ್ದೇನೆ.
ನಾನೆಲ್ಲೂ ಬೆಂಗಳೂರು ಬಾಂಬೆನಲ್ಲಿ ಇಲ್ಲ. ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದೇನೆ. ಕಾಂಗ್ರೇಸ್ ದುಡ್ಡಿಲ್ಲದೆ ಗ್ಯಾರಂಟಿಗಳನ್ನ ನಡೆಸಿಕೊಂಡು ಹೋಗುತ್ತಿದೆ. ಜನರಿಗೆ ಬೇಕಾದ ಅಗತ್ಯತೆಗಳನ್ನ ನೀಡುತ್ತಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಮೈತ್ರಿ ಅಭ್ಯರ್ಥಿ ಮಾಡಿದಾರೆ ಎಂದು ತಿಳೀಸಿದರು.