ಬೆಳಗಾವಿ:- ಮನುಷ್ಯ ನೀರಡಿಕೆಯಾದಾಗ ಕೇಳಬಹುದು,ಆದರೆ ಮೂಕ ಜೀವಗಳ ಕೂಗು ಯಾರಿಗೂ ಕೇಳಿಸುವುದಿಲ್ಲ. ಭಯಂಕರ ಬಿಸಿಲಿನ ತಾಪಮಾನಕ್ಕೆ ಪಕ್ಷಿಗಳು ಅಕ್ಷರಶಃ ನಲುಗಿ ಹೋಗಿವೆ ಮೂಕ ಜೀವಗಳ ಸ್ಥಿತಿಯನ್ನ ಮನಗಂಡು ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳು ಮಾಡಿದ್ದೇನು ಅಂತಿರಾ ತೋರಿಸ್ತೀವಿ ನೋಡಿ…
ಈ ದೃಶ್ಯಗಳು ಕಂಡುಬಂದಿದ್ದು ಬೆಳಗಾವಿಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಂಬರಗಿ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ. ಪ್ರತಿಯೊಬ್ಬರ ಕೈಯಲ್ಲೊಂದು ನೀರಿನ ಬಾಟಲ್ ಅದರ ಮೇಲೊಂದು ಪ್ಲೇಟ್, ಇವೆಲ್ಲವನ್ನೂ ವಿಶೇಷವಾಗಿ ವಿನ್ಯಾಸಗೊಳಿಸುತ್ತಿರುವ ಮಕ್ಕಳು. ಇವರೆಲ್ಲಾ ಯಾರು ಇದೆನ್ ಯಾವುದಾದ್ರೂ ಕಾಂಪಿಟೇಶನ್ ಸ್ಪರ್ಧೆ ಇರಬಹುದಾ ಅಂದಕೊಂಡ್ರಾ ಖಂಡಿತ ಅಲ್ಲ ಇವರೆಲ್ಲರೂ ತಮ್ಮ ಕೈಲಾದಷ್ಟು ಪಕ್ಷಿ ಸಂಕುಲದ ಉಳುವಿಗೆ ಪಣತೊಟ್ಟು ಪ್ಲ್ಯಾಸ್ಟಿಕ್ ಹಾಗೂ ಗಿಡದ ಸಿಪ್ಪೆ,ತೆಂಗಿನಕಾಯಿ ಬಳಸಿಕೊಂಡು ಪಕ್ಷಿಗಳಿಗೆ ನೀರುಣಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಸಾರಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಂಬರಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಸೇರಿ ಪಕ್ಷಿ ಸಂಕುಲದ ಉಳಿವಿಗಾಗಿ ಇಂಥಹ ಒಂದು ಮಹತ್ಕಾರ್ಯಕ್ಕೆ ಮುಂದಾಗಿದ್ದು , ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿನ ತಾಪಮಾನ ಜಾಸ್ತಿ ಆಗಿದ್ದರಿಂದ ಈಗಲೇ ನೀರಿಗಾಗಿ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಒಟ್ಟಾರೆ ಮೂಕ ಪಕ್ಷಿಗಳ ಕಷ್ಟಕ್ಕೆ ಗಿಡ ಮರಗಳಲ್ಲಿ ಆಹಾರ, ನೀರು ಇಡುವುದರ ಮೂಲಕ ಸರ್ಕಾರಿ ಶಾಲೆಯ ಮಕ್ಕಳು ಮಾನವಿಯತೆಯ ಮೌಲ್ಯಗಳನ್ನು ಎತ್ತಿ ಹಿಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.