ಮಂಡ್ಯ :- ಈ ಹಿಂದೆ ಅಂದ್ರೆ 2019 ರ ಸಕ್ಕರೆ ನಾಡು ಮಂಡ್ಯದಲ್ಲಿ ತನ್ನ ಸೋಲಿನ ಸೇಡು ತೀರಿಸಿಕೊಳ್ಳಲು ಅಪ್ಪನ ಗೆಲುವಿಗೆ ಮಗ ನಿಖಿಲ್ ಪಣತೊಟ್ಟಿದ್ದಾರೆ.
IPL 2024: RCB ಮುಂದಿನ ಎದುರಾಳಿ ಯಾರು!? – ಈ ಪಂದ್ಯ ಗೆಲ್ಲಲೇಬೇಕಿದೆ ಫಾಪ್ ಪಡೆ!
ತನಗೆ 2019 ರಲ್ಲಿ ಆದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ನಿಖಿಲ್ ತನ್ನ ತಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿ ಅವರ ಗೆಲುವಿನ ರಣತಂತ್ರ ರೂಪಿಸುತ್ತಿದ್ದಾರೆ. 2019ರ ಚುನಾವಣೆಯಲ್ಲಿ ಸುಮಲತಾ ಪರ ತೆರೆ ಹಿಂದೆ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿದ್ದ ಚಲುವರಾಯಸ್ವಾಮಿ ಕ್ಷೇತ್ರವಾದ ನಾಗಮಂಗಲದಿಂಲೇ ನಿಖಿಲ್ ಇಂದಿನಿಂದ ತಂದೆಯ ಪರ ಚುನಾವಣೆಯ ಪ್ರಚಾರ ಆರಂಭ ಮಾಡಲಿದ್ದಾರೆ
ಈ ಮೂಲಕ ಚಲುವರಾಯಸ್ವಾಮಿ ಅವರಿಗೆ ನಿಖಿಲ್ ಠಕ್ಕರ್ ನೀಡಲು ಹೊರಟಿದ್ದಾರೆ. ಇಂದು ನಿಖಿಲ್ ನಾಗಮಂಗಲದಲ್ಲಿ 11 ಗಂಟೆಗೆ ಹಾಗೂ ಕೆಆರ್ ಪೇಟೆಯಲ್ಲಿ 2 ಗಂಟೆಗೆ ಬಿಜೆಪಿ-ಜೆಡಿಎಸ್ ನಾಯಕರು, ಮುಖಂಡರು, ಕಾರ್ಯಕರ್ತರ ಜೊತೆ ಚುನಾವಣಾ ಪ್ರಚಾರ ಸಭೆ ಮಾಡಲಿದ್ದಾರೆ. ಒಟ್ಟಾರೆ ಕಳೆದ ಬಾರಿಯಾದ ಸೋಲಿನ ಸೇಡು ತೀರಿಸಿಕೊಳ್ಳಲು ತಂದೆ ಕುಮಾರಸ್ವಾಮಿ ಅವರ ಗೆಲುವಿಗಾಗಿ ನಿಖಿಲ್ ಮಂಡ್ಯದಲ್ಲಿ ಸ್ವತಃ ಅಖಾಡಕ್ಕೆ ಇಳಿಸಿದಿದ್ದಾರೆ. ಇದಕ್ಕೆ ಕೈ ನಾಯಕರ ಪಟ್ಟು ಏನು ಅನ್ನೋದು ಕಾದು ನೋಡಬೇಕಿದೆ.